ಮದ್ದೂರು ಗಣೇಶೋತ್ಸವ : ಪ್ರತಾಪ್ ಸಿಂಹ ಸೈಡ್ಲೈನ್ ಆಗಿರೋದಕ್ಕೆ ಈ ರೀತಿ ಮಾತಾಡ್ತಾ ಇದ್ದಾರೆ : ಸಿದ್ದರಾಮಯ್ಯ

1 Min Read

 

ಬೆಂಗಳೂರು: ಮದ್ದೂರಿನ ಗಣೇಶೋತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಹೌಹಾರಿದ್ದಾರೆ. ಪ್ರತಾಪ್ ಸಿಂಹ ಅವರ ಮಾತಿಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಗಲಾಟೆ ಮಾಡುವುದು, ದೊಂಬಿ ಮಾಡುವುದು ಇದರ ಹಿಂದೆ ಯಾರೆಲ್ಲಾ ಇದ್ದಾರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಸಂಬಂಧ ಪಟ್ಟವರು ಮದ್ದೂರಿಗೆ ಹೋಗ್ತಾ ಇದ್ದಾರೆ. ಬಳಿಕ ಅಲ್ಲಿ ಪರಿಶೀಲನೆ ಮಾಡಿ, ಕ್ರಮ ತೆಗೆದುಕೊಳ್ಳುತ್ತೇವೆ. ಮಸೀದಿ ಮುಂದೆ ಹೋಗುವಾಗ ಕಲ್ಲು ತೂರಾಟವಾಗಿದೆ. ಸ್ವಲ್ಪ ಲಾಠಿ ಪ್ರಹಾರವಾಗಿದೆ. ಪೊಲೀಸರು ಹೇಳಿದಾಗಲೂ ಪೊಲೀಸರ ಮಾತನ್ನ ಕೇಳಿಲ್ಲ. 21 ಜನ ಅರೆಸ್ಟ್ ಆಗಿದ್ದಾರೆ. ಹಿಂದೂಗಳೇ ಮಾಡಿದ್ದರೂ, ಮುಸಲ್ಮಾನರೇ ಆ ತಪ್ಪನ್ನ ಮಾಡಿದ್ದರು ಕೂಡ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ‌. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಎಲ್ಲೂ ಕೂಡ ನಡೆದಿಲ್ಲ. ಆದರೆ ಮದ್ದೂರಲ್ಲಿ ಈ ರೀತಿ ಆಗಿದೆ ಅಂತಾನೇ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದೇ ವೇಳೆ ಬಾನು ಮುಷ್ತಾಕ ಅವರ ದಸರಾ ಉದ್ಘಾಟನೆ ವಿಚಾರಕ್ಕೆ ಪ್ರತಾಪ್ ಸಿಂಹ ಕೋರ್ಟ್ ಮೊರೆ ಹೋದ ವಿಚಾರಕ್ಕೆ ಮಾತನಾಡಿದ್ದು, ಕೋರ್ಟ್ ನಲ್ಲಿಯೇ ತೀರ್ಮಾನ ಆಗ್ಲಿ. ನಿಸಾರ್ ಅಹ್ಮದ್ ಇದ್ದಾಗ ಕೋರ್ಟ್ ಹೋಗ್ಲಿಲ್ಲ. ಮಿರ್ಜಾ ಇಸ್ಮಯಿಲ್ ಮೆರವಣಿಗೆಯಾದಾಗ ಕೋರ್ಟ್ ಹೋಗ್ಲಿಲ್ಲ. ಟಿಪ್ಪು ವಿಚಾರ ಬಂದಾಗ ಕೋರ್ಟ್ ಹೋಗ್ಲಿಲ್ಲ. ಬಹುಶಃ ಪಾರ್ಟಿಯಿಂದ ನಿರ್ಲಕ್ಷ್ಯ ಮಾಡಿರುವುದಕ್ಕೋಸ್ಕರ ಹೋಗಿರಬಹುದು ಎಂದಿದ್ದಾರೆ ಸಿದ್ದರಾಮಯ್ಯ ಅವರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks