Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾರ್ಥಿಗಳು ಸಂಶೋಧನೆಗೆ ಒತ್ತು ನೀಡಲಿ : ಎಸ್.ನಾಗಭೂಷಣ್

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ವಿದ್ಯಾರ್ಥಿಗಳು ಸಂಶೋಧನೆಗೆ ಮತ್ತು ಮೂಲವಿಜ್ಞಾನಕ್ಕೆ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸಲಹೆ ನೀಡಿದರು.

ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಮ್ಮಿಕೊಂಡಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ತಾರ್ಕಿಕ ಪ್ರವೃತ್ತಿ , ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ” ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ ರಾ ವಿ ಪ ರಾಜ್ಯ ಖಜಾಂಚಿ ಎಚ್.ಎಸ್.ಟಿ.ಸ್ವಾಮಿಯವರು ಮಾತನಾಡಿ, ವಿಜ್ಞಾನ ವಿಷಯವು ಕೇವಲ ಪರೀಕ್ಷೆಗೆ ಹಾಗೂ ಅಂಕಗಳಿಕೆಗೆ ಸೀಮಿತವಾಗದೆ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ವೈಜ್ಞಾನಿಕ ಚಿಂತನೆಯ ಕಡೆ ಇರಬೇಕು” ಎಂದು ತಿಳಿಸಿದರು.

ಕ ರಾ ವಿ ಪ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ ಮಾತನಾಡಿ, ಇಂತಹ ವಿಜ್ಞಾನ ಸಮಾವೇಶಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ  ತಮ್ಮ ಹಿರಿಮೆಯನ್ನು ಮೆರೆಯಲಿ. ಎಂದರು.

ಕ.ರಾ.ವಿ.ಪ ಜಿಲ್ಲಾ ಅಧ್ಯಕ್ಷರಾದ ಲತೀಫ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಡಿ. ಗೋಪಾಲನಾಯಕ, ಮುಖ್ಯ ಶಿಕ್ಷಕ ಕರಿಯಪ್ಪ, ಕರಾವಿಪ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಈ.ರುದ್ರಮುನಿ, ಹಾಲೇಶ್, ಶ್ರೀನಿವಾಸಮೂರ್ತಿ, ಜಿಲ್ಲಾ ಸಂಯೋಜಕ ಮಂಜುನಾಥ್ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ಇದರಲ್ಲಿ ಅತ್ಯುತ್ತಮವಾದ 10 ಸಂಶೋಧನಾ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕಯಾಗಿವೆ. ರಾಜ್ಯಮಟ್ಟದ ಸಮಾವೇಶವು 2024 ರ ಜನವರಿ ತಿಂಗಳ ಎರಡನೇ ವಾರದಲ್ಲಿ ಕೊಪ್ಪಳದಲ್ಲಿ ನಡೆಯಲಿದೆ.

“ರಾಜ್ಯಮಟ್ಟಕ್ಕೆ ಆಯ್ಕೆ”

ಗ್ರಾಮೀಣ ಹಿರಿಯರ ವಿಭಾಗ

1. ಸೃಷ್ಟಿ ಕೆ.ಏನ್ D V S ಪ್ರೌಢಶಾಲೆ, ಭರಮಸಾಗರ ಚಿತ್ರದುರ್ಗ ತಾಲ್ಲೂಕು
2. ಮೌಲ್ಯಶ್ರೀ A ಯಜ್ಞಾವಲ್ಕ್ಯ ಪಬ್ಲಿಕ್ ಸ್ಕೂಲ್ ಭೀಮನಬಂಡೆ, ಹಿರಿಯೂರು ತಾಲ್ಲೂಕು
3. ಅನುಷ್ R ಇಂದಿರಾಗಾಂಧಿ ವಸತಿ ಶಾಲೆ, ಚಳ್ಳಕೆರೆ ತಾಲೂಕು

ಗ್ರಾಮೀಣ ಕಿರಿಯರ ವಿಭಾಗ

1. ತನುಜಾ  ಸರ್ಕಾರಿ ಪ್ರೌಢಶಾಲೆ ಚೌಳಿಹಳ್ಳಿ ಗೊಲ್ಲರಹಟ್ಟಿ ಚಿತ್ರದುರ್ಗ ತಾಲ್ಲೂಕು
2.ಸುಪ್ರೀತಾ, K N
D V S ಪ್ರೌಢಶಾಲೆ ಭರಮಸಾಗರ,  ಚಿತ್ರದುರ್ಗ ತಾಲ್ಲೂಕು

ನಗರ ಹಿರಿಯರ ವಿಭಾಗ
1. ಮೌನಿಶ್ S A ವಿದ್ಯಾವಿಕಾಸ ವಿದ್ಯಾ ಸಂಸ್ಥೆ ಚಿತ್ರದುರ್ಗ
2. ವಿಜಯಲಕ್ಷ್ಮಿ M V
S R S  ಶಾಲೆ ಚಿತ್ರದುರ್ಗ
3. ರುಮಾಂಡ್ಲ ಅಧಿತ್ರಿ  S R S ಹೆರಿಟೇಜ್ ಪ್ರೌಢಶಾಲೆ ಚಳ್ಳಕೆರೆ

ನಗರ ಕಿರಿಯರ ವಿಭಾಗ
1. ನಿಬೋಧ್ ಚಕ್ರವರ್ತಿ ಡಾನ್ ಬಾಸ್ಕೋ, ಚಿತ್ರದುರ್ಗ
2. ದಿಯಾ ಗಂಧವಿಡಿ ಸಹ್ಯಾದ್ರಿ ಪ್ರೌಢಶಾಲೆ, ಚಳ್ಳಕೆರೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!