ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಸಿಎಂ ಬದಪಾವಣೆ ಇರಬಹದು, ಕೆಪಿಸಿಸಿ ಅಧ್ಯಕ್ಚರ ಬದಲಾವಣೆ ಇರಬಹುದು ಹೀಗೆ ನಾನಾ ವಿಚಾರಗಳು ಚರ್ಚೆಯಾಗುತ್ತಿವೆ. ಇದರ ನಡುವೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಇತ್ತೀಚೆಗೆ ಒಂದು ಮಾತನ್ನ ಹೇಳಿದ್ದರು. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದರು. ಇದೀಗ ಆ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಗೂ ಹೇಳೋದಷ್ಟೆ, ಬಿ ಆರ್ ಪಾಟೀಲ್ ಗೆ ಹೇಳೋದಷ್ಟೇ, ಬಾಲಕೃಷ್ಣಗೆ ಹೇಳೋದು ಅಷ್ಟೇ. ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರಿದ್ದಾರೆ. ಅವರ ಕೈ ಬಲಪಡಿಸುವುದು ನಮ್ಮ ಸರ್ಕಾರದ ಮೇಲಿದೆ ಎಂದು ಬಹಿರಂಗವಾಗಿ ಮಾತನಾಡುವವರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ.
ಇದೇ ವೇಳೆ ಅನುದಾನದ ವಿಚಾರದ ಬಗ್ಗೆ ಮಾತನಾಡಿ, ನಾವೂ ಒಂದು ಲಕ್ಷ ಕೋಟಿ ಅಷ್ಟು ವೆಲ್ಫೇರ್ ಕಿಟ್ಸ್ ಕೊಡ್ತಾ ಒದ್ದೀವಿ. 54 ಸಾವಿರ ಕೋಟಿ ರೂಪಾಯಿ ಇರಿಗೇಷನ್ ಹೋಗ್ತಾ ಇದೆ, ಗ್ಯಾರಂಟಿಗೆ ಹೋಗ್ತಾ ಇದೆ. 19 ಸಾವಿರ ಕೋಟಿ ರೂಪಾಯಿ ಪವರ್ ಗೆ ಹೋಗ್ತಾ ಇದೆ. ರೈತರಿಗೆ ಪವರ್ ಕೊಡ್ತಾ ಇದ್ದೀವಿ. ಬೇರೆ ಎಲ್ಲಾ ಕಡೆ ಯೋಜನೆಗಳು ಇದಾವೆ. ಎಲ್ಲಾ ಯೋಜನೆಗಳನ್ನ ಸೇರಿದರೆ ಒಂದು ಲಕ್ಷ ಕೋಟಿ ರೂಪಾಯಿ ಕೊಡ್ತಾ ಇದ್ದೀವಿ. ಅದು ಯಾರಿಗೆ ಜನರ ಅಭಿವೃದ್ಧಿಗೆ ಅಲ್ವಾ, ಕ್ಷೇತ್ರದ ಅಭಿವೃದ್ಧಿಗೆ ಅಲ್ವಾ ಎಂದು ಡಿಕೆ ಶಿವಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











