Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕನ್ನಡ ನಾಡಿಗೆ ಕುವೆಂಪು ಅವರ ಕೊಡುಗೆ ಅಪಾರ : ಹೆಚ್. ಅನಂತಕುಮಾರ್

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 12 : ಕಣಿವೆ ಮಾರಮ್ಮ ಸಂಘ ಹಾಗೂ ನಗರ ಕೇಂದ್ರ ಗ್ರಂಥಾಲಯ ವತಿಯಿಂದ ಸೋಮವಾರ ನಗರದ ಮಕ್ಕಳ ಗ್ರಂಥಾಲಯ ಸಭಾಂಗಣದಲ್ಲಿ ಕುವೆಂಪು ನುಡಿ ನಮನ ಸಂಸ್ಕರಣ ಕಾರ್ಯಕ್ರಮ ಜರುಗಿತು.

 

ಅಂಕಣಕಾರ ಹಾಗೂ ಸಾಹಿತಿ ಹೆಚ್. ಅನಂತಕುಮಾರ್ ಮಾತನಾಡಿ, ಕುವೆಂಪು ಕನ್ನಡಕ್ಕೆ, ಕನ್ನಡ ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದೆ ಅವರ ಹಲವು ಮೊದಲುಗಳಿಗೆ ಸಾಕ್ಷಿ ಪ್ರಜ್ಞೆಯಾಗಿ ಕನ್ನಡದ ಅಸ್ತಿತ್ವದ ಅನನ್ಯತೆಯ ಹಿಮಾಲಯ ಸದೃಶ ವ್ಯಕ್ತಿ. ಅಷ್ಟೇ ಅಲ್ಲದೇ ಈ ನಾಡಿನ ಶಕ್ತಿ. ತಮ್ಮ ವೈಚಾರಿಕ ಬರಹ ಮತ್ತು ಚಿಂತನೆಗಳೊಂದಿಗೆ  ನೆಲಮೂಲ ಸಂಸ್ಕೃತಿಯ ಆಶಯಗಳನ್ನು ಮುನ್ನಲೆಯಾಗಿಸಿಕೊಂಡು ಶೋಷಿತರ, ದಮನಿತರ ಪರವಾದ ಬರವಣಿಗೆಯ ಮೂಲಕ ಗಟ್ಟಿಧ್ವನಿಯಾದವರು ಕುವೆಂಪು. ಅವರ ಗೊಬ್ಬರ ಕವಿತೆ ಇದಕ್ಕೆ ಸಾಕ್ಷಿ ಎಂದರು.

 

ಮುಖ್ಯ ಗ್ರಂಥಾಲಯಧಿಕಾರಿ ಬಸವರಾಜ್ ಕೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುಗದ ಕವಿ, ಜಗದ ಕವಿ, ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ಕುವೆಂಪು. ಸಮಾನ ಮನಸುಗಳು ಒಗ್ಗೂಡಿದಾಗ ವಿಷಯ ಮತ್ತಷ್ಟು. ಇಂದಿನ ಯುವ ಪೀಳಿಗೆ ಸುಖಾ ಸುಮ್ಮನೆ ಕಾಲಹರಣ ಮಾಡದೇ, ಇಂತಹ ಕಾಯ್ರ್ರಮಗಳಲ್ಲಿ ಭಾಗವಹಿಸುವ ಮೂಲಕ ಮಹಾನ್ ವ್ಯಕ್ತಿಗಳ ಜೀವನ, ಸಾಧನೆ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಯಾರ ಜೊತೆ, ಯಾವ ಪುಸ್ತಕಗಳ ಜೊತೆ ಸಾಂಗತ್ಯ ಬೆಳೆಸಿ ಒಡನಡಿಗಳಾಗುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ಮತ್ತು ನಾವು ಬೆಳೆಯಲು ನಿದರ್ಶನವಾಗುತ್ತದೆ ಎಂದರು.

 

ಪರಿಸರ ಪ್ರೇಮಿ ಮಾಸ್ಟರ್ ಮಲ್ಲಿಕಾರ್ಜುನ್  ಮಾತನಾಡಿ, ಅತಿರಥ ಮಹಾಶಯ ಕವಿಗಳಲ್ಲಿ ಶ್ರೇಷ್ಠರು. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ ಪುಣ್ಯರು ಕುವೆಂಪು. ಮಲೆನಾಡಿನ ಅಪಾರವಾದ  ಪ್ರಕೃತಿ ಸಾಂಗತ್ಯದಲ್ಲಿ ಬೆಳೆದು ಪ್ರೇರೇಪಿತರಾಗಿ ರಸ ಋಷಿಯಾದರು. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಎಲ್ಲೇ ಇರು ಹೇಗೆ ಇರು ಕನ್ನಡಕ್ಕಾಗಿ ಹೋರಾಡು. ಹಲವಾರು ಕವನಗಳ ಮೂಲಕ ಹುರಿದುಂಬಿಸಿದರು. ಅವರು ರಚಿಸಿದ ಕಾವ್ಯ, ಕಥೆ, ಕವನ,ಕಾದಂಬರಿ, ಕೃತಿಗಳು ಇಂದಿಗೂ ಶ್ರೇಷ್ಠ ಎಂದರು.

 

ಜನಪದ ಸಾಹಿತಿ ಪ್ಯಾರೇಜಾನ್ ಕನ್ನಡ ಸ್ವ ರಚಿತ ಸ್ವರ ಗೀತೆಯನ್ನು ಹಾಡಿದರು. ಪ್ರಸಾರ ಭಾರತಿ ಆಕಾಶವಾಣಿಯ ಡಾ.ನವೀನ್ ಮಸ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪ್ರಹ್ಲಾದ್, ಮಾಜಿ ಜಿ.ಪಂ.ಉಪಾಧ್ಯಕ್ಷ ಕೆ. ಪಾಪಯ್ಯ ಮತ್ತಿತರು ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...