Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಕ್ರಂ ಸಿಂಹ ತಗಲಾಕಿಕೊಂಡಿದ್ದೇಗೆ..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Facebook
Twitter
Telegram
WhatsApp

ಬೆಂಗಳೂರು: ಮಂಡ್ಯದಲ್ಲಿ ಒಬ್ಬ ವಿಧಾನ ಪರಿಷತ್ ನ ಸದಸ್ಯರ ಸಮ್ಮುಖದಲ್ಲಿ ಸರ್ಕಾರಿ ಭೂಮಿಯ ಮರ ಕಡಿದಿದ್ದಾರೆ. ಏನು ಕ್ರಮ ತೆಗೆದುಕೊಂಡ್ರಿ ಸಿದ್ದರಾಮಣ್ಣ ಅವರೆ. ನಾವೂ ಮಾಡುವುದೇ ಸರಿ ಪರಮೇಶಣ್ಣನವರೆ. ನಮ್ಮ ಅಧಿಕಾರಿಗಳು ಸಮರ್ಥರಿದ್ದಾರೆ. ಯಾವ ರೀತಿ ಸಮರ್ಥರು ನಿಮ್ಮ ಅಧಿಕಾರಿಗಳು. ಈ ಕೆಲಸ ಮಾಡುವುದಕ್ಕಾ..? ಈ ಸರ್ಕಾರದ ನಡವಳಿಕೆ ಯಾವ ಮಟ್ಟದಲ್ಲಿ ಇದೆ ಎಂಬುದಕ್ಕೆ ಇದು ಗಂಭೀರವಾದ ಉದಾಹರಣೆ. ಅಲ್ಪ ಸಂಖ್ಯಾತರಿಗೆ ತಗೋ ಏನು ಬೇಕು ಅಂತ ಎಲ್ಲಾ ಕೊಡುತ್ತೀರಿ. ಆದರೆ ಈ ಅಧಿಕಾರಿ ಸಸ್ಪೆಂಡ್ ಮಾಡಿದ್ದೀರಲ್ಲ, ಪರಮೇಶ್ವರ್ ಅವರೇ ದಲಿತ ಪ್ರಾಮಾಣಿಕ ಅಧಿಕಾರಿ. ಆ ಅಧಿಕಾರಿ ಪೋಸ್ಟಿಂಗ್ ಯಾಕೆ ಕೊಟ್ರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 

ಗೆಂಡೆಕಟ್ಟೆ ಫಾರೆಸ್ಟ್ ಇದ್ಯಲ್ಲ ಅಲ್ಲಿ ಬೀಟೆ ಮರ ಇದೆ, ಅದನ್ನ ಡಿಎಫ್ಒಗೆ ಹೇಳಿ ಕಟ್ ಮಾಡಿ, ಈ ಜಾಗದಲ್ಲಿ ಹಾಜಿ ಅಂತ ಹೇಳಿದರು. ಯಾವ ಸಂದರ್ಭದಲ್ಲಿ ಕರೆ ಮಾಡಿದರು, ಏನೇನು ಆಯ್ತು ಎಂಬುದನ್ನು ಕಾಲ್ ಲೀಸ್ಟ್ ತೆಗೆದರೇನೆ ಗೊತ್ತಾಗಿ ಬಿಡುತ್ತೆ. ಇವರ ವಿರುದ್ಧ ಮಾತನಾಡುವಂತವರ ಬಾಯಿ ಮುಚ್ಚಿಸಬೇಕು. ಹೆದರಿಸಲು ಆಡಳಿತ ಯಂತ್ರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದು ಉದಾಹರಣೆ. ಈಗ ಕರಸೇವಕರ ಕೇಸ್ ನಡೆಯುತ್ತಿದೆಯಲ್ಲ ಅದಕ್ಕೆ ಹೇಳಿದೆ.

 

ವಿಕ್ರಂ ಸಿಂಹ ಅರಣ್ಯ ಅಧಿಕಾರಿಗಳನ್ನ ಭೇಟಿ ಮಾಡಿ ಎಲ್ಲಾ ವಿಚಾರವನ್ನು ತಿಳಿಸಿದರು. ಇದಕ್ಕೂ ನನಗೂ ಸಂಬಂಧವಿಲ್ಲ ಅಂತ ಎಲ್ಲಾ ಮಾಹಿತಿ ಕೊಟ್ಟು ಹೋದರು. ಮಾಹಿತಿ ಕೊಟ್ಟು ಹೋದ ನಂತರವೂ ಅವರನ್ನು ಬಂಧಿಸುತ್ತಾರೆ. ಎ1, ಎ2ಗೆ ಬೇಲ್ ಕಿಟ್ಟರು ಇವರನ್ನ ಯಾಕೆ ಅಲ್ಲಿಯೇ ಇರಿಸಿಕೊಂಡರು. ಮ್ಯಾಜಿಸ್ಟ್ರೇಟ್ ಕೂಡ ಇವರಿಗೆ ಉಗೀತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!