Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಕ್ರಂ ಸಿಂಹ ತಗಲಾಕಿಕೊಂಡಿದ್ದೇಗೆ..? ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಆಕ್ರೋಶ

---Advertisement---

ಬೆಂಗಳೂರು: ಮಂಡ್ಯದಲ್ಲಿ ಒಬ್ಬ ವಿಧಾನ ಪರಿಷತ್ ನ ಸದಸ್ಯರ ಸಮ್ಮುಖದಲ್ಲಿ ಸರ್ಕಾರಿ ಭೂಮಿಯ ಮರ ಕಡಿದಿದ್ದಾರೆ. ಏನು ಕ್ರಮ ತೆಗೆದುಕೊಂಡ್ರಿ ಸಿದ್ದರಾಮಣ್ಣ ಅವರೆ. ನಾವೂ ಮಾಡುವುದೇ ಸರಿ ಪರಮೇಶಣ್ಣನವರೆ. ನಮ್ಮ ಅಧಿಕಾರಿಗಳು ಸಮರ್ಥರಿದ್ದಾರೆ. ಯಾವ ರೀತಿ ಸಮರ್ಥರು ನಿಮ್ಮ ಅಧಿಕಾರಿಗಳು. ಈ ಕೆಲಸ ಮಾಡುವುದಕ್ಕಾ..? ಈ ಸರ್ಕಾರದ ನಡವಳಿಕೆ ಯಾವ ಮಟ್ಟದಲ್ಲಿ ಇದೆ ಎಂಬುದಕ್ಕೆ ಇದು ಗಂಭೀರವಾದ ಉದಾಹರಣೆ. ಅಲ್ಪ ಸಂಖ್ಯಾತರಿಗೆ ತಗೋ ಏನು ಬೇಕು ಅಂತ ಎಲ್ಲಾ ಕೊಡುತ್ತೀರಿ. ಆದರೆ ಈ ಅಧಿಕಾರಿ ಸಸ್ಪೆಂಡ್ ಮಾಡಿದ್ದೀರಲ್ಲ, ಪರಮೇಶ್ವರ್ ಅವರೇ ದಲಿತ ಪ್ರಾಮಾಣಿಕ ಅಧಿಕಾರಿ. ಆ ಅಧಿಕಾರಿ ಪೋಸ್ಟಿಂಗ್ ಯಾಕೆ ಕೊಟ್ರಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

 

ಗೆಂಡೆಕಟ್ಟೆ ಫಾರೆಸ್ಟ್ ಇದ್ಯಲ್ಲ ಅಲ್ಲಿ ಬೀಟೆ ಮರ ಇದೆ, ಅದನ್ನ ಡಿಎಫ್ಒಗೆ ಹೇಳಿ ಕಟ್ ಮಾಡಿ, ಈ ಜಾಗದಲ್ಲಿ ಹಾಜಿ ಅಂತ ಹೇಳಿದರು. ಯಾವ ಸಂದರ್ಭದಲ್ಲಿ ಕರೆ ಮಾಡಿದರು, ಏನೇನು ಆಯ್ತು ಎಂಬುದನ್ನು ಕಾಲ್ ಲೀಸ್ಟ್ ತೆಗೆದರೇನೆ ಗೊತ್ತಾಗಿ ಬಿಡುತ್ತೆ. ಇವರ ವಿರುದ್ಧ ಮಾತನಾಡುವಂತವರ ಬಾಯಿ ಮುಚ್ಚಿಸಬೇಕು. ಹೆದರಿಸಲು ಆಡಳಿತ ಯಂತ್ರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತದೆ ಎಂಬುದು ಉದಾಹರಣೆ. ಈಗ ಕರಸೇವಕರ ಕೇಸ್ ನಡೆಯುತ್ತಿದೆಯಲ್ಲ ಅದಕ್ಕೆ ಹೇಳಿದೆ.

 

ವಿಕ್ರಂ ಸಿಂಹ ಅರಣ್ಯ ಅಧಿಕಾರಿಗಳನ್ನ ಭೇಟಿ ಮಾಡಿ ಎಲ್ಲಾ ವಿಚಾರವನ್ನು ತಿಳಿಸಿದರು. ಇದಕ್ಕೂ ನನಗೂ ಸಂಬಂಧವಿಲ್ಲ ಅಂತ ಎಲ್ಲಾ ಮಾಹಿತಿ ಕೊಟ್ಟು ಹೋದರು. ಮಾಹಿತಿ ಕೊಟ್ಟು ಹೋದ ನಂತರವೂ ಅವರನ್ನು ಬಂಧಿಸುತ್ತಾರೆ. ಎ1, ಎ2ಗೆ ಬೇಲ್ ಕಿಟ್ಟರು ಇವರನ್ನ ಯಾಕೆ ಅಲ್ಲಿಯೇ ಇರಿಸಿಕೊಂಡರು. ಮ್ಯಾಜಿಸ್ಟ್ರೇಟ್ ಕೂಡ ಇವರಿಗೆ ಉಗೀತು ಎಂದು ಆಕ್ರೋಶ ಹೊರ ಹಾಕಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...