ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.01 : ದೊಡ್ಡಪೇಟೆ ಕೆಂಚನಾರಹಟ್ಟಿಯಲ್ಲಿರುವ ಕಾಟಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾಳುಹಬ್ಬ ಮಾ.3 ರಿಂದ 5 ರವರೆಗೆ ನಡೆಯಲಿದೆ.

ಸೋಮವಾರ ಬೆಳಗಿನ ಜಾವ ಕೆಂಚನಾರಹಟ್ಟಿ ದೇವಸ್ಥಾನದಿಂದ ಕಾಟಲಿಂಗೇಶ್ವರಸ್ವಾಮಿಯನ್ನು ದ್ಯಾಮವ್ವನಹಳ್ಳಿ ಗ್ರಾಮದ ಗೊಂದ್ಯಾಳಪ್ಪನ ಕಾವಲ್ಗೆ ಕಾಲುನಡಿಗೆ ಮೂಲಕ ಕೊಂಡೊಯ್ದು, ಶುದ್ದೀಕರಿಸಿ ಗಂಗಾಪೂಜೆಯೊಂದಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆಯಿರುತ್ತದೆ.
ಸಂಜೆ ಆರು ಗಂಟೆಗೆ ಚಿತ್ರದುರ್ಗಕ್ಕೆ ಹಿಂದಿರುಗಿ ಕೆಳಗೋಟೆಯ ಭಕ್ತಾಧಿಗಳ ಮನೆಯಲ್ಲಿ ಪೂಜೆ ಸ್ವೀಕರಿಸಲಿದೆ. ನಂತರ ರಂಗಯ್ಯನಬಾಗಿಲು ಬಳಿಯಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಕಾಟಲಿಂಗೇಶ್ವರಸ್ವಾಮಿ ತಂಗಲಿದೆ.
ಮಾ.4 ರಂದು ರಾತ್ರಿ 8 ಗಂಟೆಗೆ ಭವ್ಯಾಲಂಕಾರದೊಂದಿಗೆ ಪೂಜೆ ಸಲ್ಲಿಸಿ ರಾಶಿ ಪೂಜೆ ಮಣೇವು ಸೇವೆ ನಂತರ ಮಹಾಮಂಗಳಾರತಿ ಅನ್ನಸಂತರ್ಪಣೆ.
5 ರಂದು ಬೆಳಿಗ್ಗೆ ದೇವಸ್ಥಾನದ ಆವರಣದಲ್ಲಿ ಗದ್ದುಗೆ ಹಾಸಿ ಅರ್ಚಕರಿಂದ ದೊಡ್ಡ ಎಡೆ ಪೂಜೆ, ನೈವೇದ್ಯ, ಗುಡಿಕಟ್ಟಿನ ಅಣ್ಣತಮ್ಮಂದಿರಿಗೆ ಪ್ರಸಾದ ವಿನಿಯೋಗಿಸಲಾಗುವುದು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಾಟಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಮಿತಿ ವ್ಯವಸ್ಥಾಪಕ ಡಿ.ಮೈಲಾರಪ್ಪ ಕೋರಿದ್ದಾರೆ.


