Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜಗಳೂರು | ಮಾರ್ಚ್ 04 ರಂದು ಕೊಡದ ಗುಡ್ಡದ ವೀರಭದ್ರ ಸ್ವಾಮಿಯ ರಥೋತ್ಸವ

---Advertisement---

 

ಸುದ್ದಿಒನ್, ದಾವಣಗೆರೆ, ಫೆ. 27 : ಜಗಳೂರು ತಾಲೂಕಿನ ಕೊಡದ ಗುಡ್ಡ ಗ್ರಾಮದಲ್ಲಿ ಮಾರ್ಚ್ 04 ರಂದು ಬುಧುವಾರ ಸಾಯಂಕಾಲ 4.30 ರ ಸಮಯಕ್ಕೆ ಸರಿಯಾಗಿ ಮಹಾರಥೋತ್ಸವ ನಡೆಯಲಿದೆ.

 

ಜಾತ್ರೆಯ ಪ್ರಯುಕ್ತ ಕಾರ್ಯಕ್ರಮಗಳು ಫೆಬ್ರವರಿ 28 ರಂದು ಶನಿವಾರ ಕಂಕಣ ಧಾರಣೆ ಮಹೋತ್ಸವ  ಹಾಗೂ ಮಾರ್ಚ್ 1 ಭಾನುವಾರ ಮಹಾ ಗಣರಾಧನೆ, 2 ರಂದು ಸೋಮವಾರ ಗಜ ವಾಹನ ಉತ್ಸವ, 3 ರಂದು ಮಂಗಳವಾರ ವೃಷಭ ವಾಹನೋತ್ಸವ, 4 ರಂದು ಬುದುವಾರ ಬೆಳಗ್ಗೆ 6 ಗಂಟೆಗೆ ಅಗ್ನಿ ಗುಂಡ ಮಹೋತ್ಸವ ಅಂದು ಸಂಜೆ 4:30 ಸಮಯಕ್ಕೆ ಮಹಾ ರಥೋತ್ಸವ ನಡೆಯಲಿದೆ. 6 ರಂದು ಶುಕ್ರವಾರ ಬೆಳಗ್ಗೆ ಓಕಳಿ ಕಾರ್ಯಕ್ರಮವಿರುತ್ತದೆ, ಇದೇ ಸಂದರ್ಭದಲ್ಲಿ ಮಾರ್ಚ್ 7 ರ  ಶನಿವಾರದಿಂದ 18 ರ ಬುಧವಾರದವರೆಗೆ  ಎತ್ತಿನ ಜಾತ್ರೆ ಮಾಡಲು ಕಮಿಟಿ ಅವರು ತೀರ್ಮಾನಿಸಿದ್ದಾರೆ ಆದ ಕಾರಣ ಎಲ್ಲಾ ರೈತ ಬಾಂಧವರು ಈ ಸದಾವಕಾಶವನ್ನು ಬಳಸಿಕೊಳ್ಳಲು ತಿಳಿಸಿದ್ದಾರೆ, ಹಾಗೂ ಜಾತ್ರೆಗೆ ಬರುವ ಪಾದಯಾತ್ರೆಗಳಿಗೆ ಮುಷ್ಟಿಗಳ ಹಳ್ಳಿ ಬಸವರಾಜಪ್ಪ ಇವರ ತೋಟದಲ್ಲಿ ಪ್ರಸಾದದ ವ್ಯವಸ್ಥೆಯು ಸಹ ಮಾಡಲಾಗಿದೆ, ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಸಾರಿಗೆ ವ್ಯವಸ್ಥೆ ಅನುಕೂಲ ಇರುವದರಿಂದ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ಮೊಬೈಲ್ ಸಂಖ್ಯೆ 9972056239. .9880877058.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...