Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಿದ್ರೆ : ಯತ್ನಾಳ್ ಉತ್ತರವೇನು..?

---Advertisement---

ದೆಹಲಿ: ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಯತ್ನಾಳ್ ಬಣ ನಾವೇ ಅಧ್ಯಕ್ಷರಾಗ್ತೀವಿ ಅಂತಿದ್ದಾರೆ. ಇದೀಗ ದೆಹಲಿ ಚುನಾವಣೆಯ ಫಲಿತಾಂಶವೂ ಹೊರಬಿದ್ದಿದ್ದು, ಕರ್ನಾಟಕ ಬಣ ಬಡಿದಾಟಕ್ಕೆ ಅಂತ್ಯವಾಡಲು ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿಯೇ ಇಂದು ವಿಜಯೇಂದ್ರ ಹಾಗೂ ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ.

ಈ ಬಗ್ಗೆ ಯತ್ನಾಳ್ ಮಾತನಾಡಿದ್ದು, ಏನು ಸಂಧಾನ ಇಲ್ರಿ. ಸಂಧಾನ ಆಗುವಂಥದ್ದು ಏನು ಇಲ್ಲ. ನಾವೂ ನಮ್ಮ ಪಕ್ಷದ ಹಿತ ದೃಷ್ಟಿಯಿಂದ, ಪಕ್ಷಕ್ಕೆ ಚೈತನ್ಯ ತುಂಬುವಂತಹ ಕೆಲಸ ಆಗಬೇಕು. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ 25 ಕ್ಷೇತ್ರಗಳನ್ನ ಗೆಲ್ಲಬೇಕಿತ್ತು. ಅವರು ಟೆನ್ಶನ್ ಆಗಿರೋದು ಗೊತ್ಯಿಲ್ಲ ನಾವೂ ರಾಷ್ಟ್ರೀಯ ಅಧ್ಯಕ್ಷರಿಗೆ ಮೆನ್ಶನ್ ಮಾಡೋದಕ್ಕೆ ಬಂದಿದ್ದೀನಿ. ಕಳೆದ ಬಾರಿಯಾಗಲಿ ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿರಲಿಲ್ಲ. ಮೊನ್ನೆ ಬಂದಿದ್ದು ಯಾಕೆ ಅಂದ್ರೆ ಫೌಂಡೇಶನ್ ಹಾಕುವುದಕ್ಕೆ. ಬರೀ ನಾವೇ ಭೇಟಿಯಾಗೋದ್ರಿಂದ ರಾಷ್ಟ್ರೀಯ ನಾಯಕರಿಗೆ ಮುಜುಗರ ಆಗಬಾರದು. ಹೀಗಾಗಿ ಕಳೆದ ಬಾರಿ ಬಂದಾಗ ಸಂಸದರನ್ನಷ್ಟೇ ಭೇಟಿಯಾದ್ವಿ. ನಮ್ಮ ಪರವಾಗಿಯೇ ಬೆಂಬಲವಿದೆ.

ನೇರವಾಗಿ ಸೋಮಣ್ಣ ಅವರ ಮನೆಗೆ ಹೋಗ್ತೀವಿ, ಅಲ್ಲಿ ಒಂದೆರಡು ಗಂಟೆ ಇರ್ತೀವಿ. ಅಲ್ಲಿ ಚರ್ಚೆ ಏನಾದ್ರೂ ಆದ್ರೆ ಚರ್ಚೆ ಮಾಡ್ತೀವಿ, ನೇರವಾಗಿ ಏರ್ಪೋರ್ಟ್ ಹೋಗ್ತೀವಿ. ಈಗ್ಲೆ ಒಮ್ಮೆ ಮುಂದಿನದ್ದೆಲ್ಲ ಭವಿಷ್ಯವನ್ನು ಹೇಳಲ್ಲ. ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ರೆ ಅವಾಗ ಹೇಳ್ತೀವಿ. ನಾನು ಅದರ ಬಗ್ಗೆ ಏನು ರಿಯಾಕ್ಷನ್ ಕೊಡಲ್ಲ. ನಾವೂ ಅಷ್ಟೇ ಕಾನ್ಫಡೆಂಟ್ ಆಗಿದ್ದೀವಿ. ನಾವೇನು ಭಯಭೀತರಾಗಿಲ್ಲ. ನಮ್ಮ ಹೈಕಮಾಂಡ್ ಹೇಳಿದ ಮಾರು ಫೈನಲ್. ರಾತ್ರಿ ಕಂಡ ಬಾವಿಗೆ ಹಗಲು ಬೀಳಬೇಕೆಂದರೂ ಬೀಳ್ತೇವೆ. ನಮ್ಮ ಹೈಕಮಾಂಡ್ ನಾಯಕರು ಹಾಗೆ ಮಾಡಲ್ಲ. ವಿಶ್ವಾಸದ ಆಧಾರದ ಮೇಲೆ ನಾವೂ ಹೊರತು ಅಡ್ಜೆಸ್ಟ್ ಮೆಂಟ್ ಗಿರಾಕಿಗಳಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...