Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಾಳಿ ಮಳೆಗೆ ಕರೆಂಟ್ ಹೋದ್ರೆ ಈ ನಂಬರ್ ಗೆ ವಾಟ್ಸಾಪ್ ಮಾಡಿ

---Advertisement---

ಬೆಂಗಳೂರು: ಇನ್ನು ಮಳೆಗಾಲ ಶುರುವಾಯ್ತು. ಈ ಮಳೆಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ಮರಗಿಡಗಳು ಬೀಳುತ್ತವೆ, ಪವರ್ ಕಟ್ ಸಮಸ್ಯೆಗಳು ಕೂಡ ಕಾಡುತ್ತವೆ. ಈ ವೇಳೆ ಬೆಸ್ಕಾಂನವರು ಜನರ ಕೈಗೆ ಸಿಗುವುದು ಕಷ್ಟವಾಗಿದೆ. ಆದರೆ ಜನರ ಸಮಸ್ಯೆಯನ್ನು ತ್ವರಿತವಾಗಿ ಸರಿ ಮಾಡುವುದಕ್ಕೆ ಇದೀಗ ಬೆಸ್ಕಾಂ ವಾಟ್ಸಾಪ್ ನಂಬರ್ ಸೌಲಭ್ಯ ಶುರು ಮಾಡಿದೆ. ಎಲ್ಲಿ, ಏನೇ ಸಮಸ್ಯೆ ಆಗಿ ಪವರ್ ಕಟ್ ಆದರೂ, ತಕ್ಷಣ ಒಂದು ವಾಟ್ಸಾಪ್ ಮಾಡಿದರೆ ಸಾಕು ಬೆಸ್ಕಾಂನವರು ಅಲ್ಲಿಗೆ ಬಂದು ಸಮಸ್ಯೆಯನ್ನು ಬಗೆಹರಿಸುತ್ತಾರೆ.

ಬೆಸ್ಕಾಂ ಸೂಚಿಸಿದ ನಂಬರ್ ಗೆ ಹಾನಿಯಾದ ವಿದ್ಯುತ್ ಕಂಬದ ಫೋಟೋ ಹಾಗೂ ವಿಳಾಸವನ್ನು ಮೆಸೇಜ್ ಮಾಡಬೇಕಿದೆ. ಈ ಮೆಸೇಜ್ ಬಂದ ಕೂಡಲೇ ಬೆಸ್ಕಾಂ ತನ್ನ ಸಿಬ್ಬಂದಿಯನ್ನು ಕಳುಹಿಸಿ ಕೊಡಲಿದೆ. ಸಮಸ್ಯೆಗೆ ತಕ್ಷಣವೇ ಪರಿಹಾರ ಸಿಗಲಿದೆ‌. ನಿಮ್ಮ ನಿಮ್ಮ ಪ್ರದೇಶಗಳಿಗೆ ಬೇರೆ ಬೇರೆ ನಂಬರ್ ಇದೆ. ಸೇವ್ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬಹುದು.

 

ಬೆಂಗಳೂರು ಪೂರ್ವ- 8277884013
ಬೆಂಗಳೂರು ಪಶ್ಚಿಮ- 8277884012
ಬೆಂಗಳೂರು ಉತ್ತರ- 8277884014
ಬೆಂಗಳೂರು ದಕ್ಷಿಣ- 8277884011
ಕೋಲಾರ- 8277884015
ಚಿಕ್ಕಬಳ್ಳಾಪುರ- 8277884016
ಬೆಂಗಳೂರು ಗ್ರಾಮಾಂತರ- 827788401
ರಾಮನಗರ-8277884018
ತುಮಕೂರು- 8277884019
ಚಿತ್ರದುರ್ಗ- 8277884020
ದಾವಣಗೆರೆ- 8277884021 ಈ ನಂಬರ್ ಗೆ ಕರೆ ಮಾಡುವ ಮೂಲಕ ಮಳೆಗಾಲದಲ್ಲಿ ಎದುರಾಗುವ ಕರೆಂಟ್ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...