ಬೆಂಗಳೂರು: 17-18ಕ್ಕೋ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗ್ತಾರೆ. ಅಲ್ಲಿ ದೆಹಲಿ ಮುಖಂಡರನ್ನ ಭೇಟಿ ಮಾಡ್ತಾರೆ. ಅಲ್ಲಿ ಹೋದ ಮೇಲೆ ಇವರು ಕೂಡ ಚರ್ಚೆ ನಡೆಸ್ತಾರೆ. ಅಲ್ಲಿ ಚರ್ಚೆಯೆಲ್ಲಾ ಆದ ಮೇಲೆ ಇಲ್ಲಿ ರಾಜಕಾರಣದಲ್ಲಿ ಏನು ಬದಲಾವಣೆ ಆಗಬೇಕೋ ಅದು ಆಗುತ್ತೆ. ಕೊಟ್ಟ ಮಾತು ನಡೆಸಿಕೊಳ್ಳಬೇಕು ಅಂತ ಹೇಳೋನೆ ನಾನು. ಮಾತು ಕೊಟ್ಟಿದ್ದರೆ ತಾನೇ ನಡೆಸಿಕೊಳ್ಳುವುದು. ಯಾವ ಮಾತು ಕೊಟ್ಟವ್ರೆ ಅನ್ನೋದು ಯಾರಿಗೆ ಗೊತ್ತಿದೆ. ಯಾರಾದ್ರೂ ಬಹಿರಂಗವಾಗಿ ಹೇಳ್ಬೇಕು ಅಲ್ವಾ ಎಂದಿದ್ದಾರೆ.
ಶಿವಕುಮಾರ್ ಅವರು ಹೇಳಿದ ಮಾತನ್ನ ಒಪ್ಪುತ್ತೇನೆ. ಕೊಟ್ಟ ಮಾತು ಅಂತ ಇದೆಯಲ್ಲ ಅದು ಇಲ್ಲಿ ವರ್ಲ್ಡ್ ಪವರ್ ಇದ್ದಂತೆಯೇ. ಕೊಟ್ಟ ಮಾತನ್ನ ಬದಲಾಯಿಸಿ ಅಂತಾನು ಅಲ್ಲ. ಕುಮಾರಸ್ವಾಮಿ ಅವರು ಯಡಿಯೂರಪ್ಪ ಆದ್ಮೇಲೆ ಇವರೇ ಮುಖ್ಯಮಂತ್ರಿ ಅಂತ ದೇಶದಲ್ಲೆಲ್ಲಾ ಭಾಷಣ ಮಾಡಿಕೊಂಡು ಬಂದಾದ್ಮೇಲೆ ಅಧಿಕಾರ ಕೊಡುವಾಗ ಅಗ್ರಿಮೆಂಟ್ ಪೇಪರ್ ಗೆ ಉತ್ತರ ಕೊಡಬೇಕು ಅಂದ್ರಲ್ಲ. ಅದು ಕೊಟ್ಟ ಮಾತೇ ತಾನೇ. ರಾಜಕಾರಣದಲ್ಲಿ ನೋಡೋಣಾ. ಕೊಟ್ಟ ಮಾತಂತೆ ನಡೆಯಬೇಕು ಅನ್ನೋದು ನಿಜ. ಈ ಬಗ್ಗೆ ಎಲ್ಲಾ ನನಗೆ ಗೊತ್ತಿಲ್ಲ ಎಂದಿದ್ದಾರೆ.

ನನಗೆ ಸಂಪುಟ ಇದ್ದರು ಹೀಗೆ ಇರ್ತೀನಿ, ಇಲ್ಲದೆ ಇದ್ದರು ಹೀಗೆ ಇರ್ತೀನಿ. ನಾನ್ಯಾವತ್ತು ಅಧಿಕಾರವನ್ನು ಹುಡುಕಿಕೊಂಡು ಹೋದವನಲ್ಲ. ನಾನು ಮಂತ್ರಿ ಇದ್ದಾಗಲೂ ಹೇಳಿದ್ದೆ ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ರೆ ಮಂತ್ರಿ ಸ್ಥಾನ ಬಿಡ್ತೀನಿ ಅಂತ ಹೇಳಿದ್ದೆ. ಇವಾಗ ಬಿಡೋದಕ್ಕೆ ಏನು ಇಲ್ಲ. ಈಗಲೂ ಅಧ್ಯಕ್ಷ ಸ್ಥಾನ ಸಿಕ್ಕುದ್ರೆ ಪಕ್ಷ ಸಂಘಟನೆ ಮಾಡ್ತೀನಿ ಎಂದಿದ್ದಾರೆ.


















