Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶ‌ನ್ ಹೆಲ್ತ್ ಕಂಡೀಷನ್ ಈಗ ಹೇಗಿದೆ..?

---Advertisement---

ಬೆಂಗಳೂರು: ಆರೋಗ್ಯ ಸಮಸ್ಯೆಯ ಕಾರಣದಿಂದಾನೇ ನಟ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅದು ಕೇವಲ ಆರು ವಾರಗಳ ಕಾಲ ಮಾತ್ರ. ಹೀಗಾಗಿ ದರ್ಶನ್ ತಮ್ಮ ಹೆಲ್ತ್ ಕಂಡೀಷನ್ ಬಗ್ಗೆ ಆಗಾಗ ಹೈಕೋರ್ಟ್ ಗೆ ಮಾಹಿತಿಯನ್ನು ನೀಡುತ್ತಲೆ ಇರಬೇಕು. ಇಂದು ಹೈಕೋರ್ಟಗ ಗೆ ದರ್ಶನ್ ಪರ ವಕೀಲರು ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ದರ್ಶನ್ ಈಗ ಹೇಗಿದ್ದಾರೆ ಎಂಬುದನ್ನು ತಿಳಿಸಲಾಗಿದೆ.

ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರ ರೋಗ ತಜ್ಞ ಡಾ.ನವೀನ್ ಮತ್ತು ಅವರ ತಂಡ ದರ್ಶನ್ ಅವರನ್ನು ಪರೀಕ್ಷೆ ಮಾಡುತ್ತಿದೆ. ಬೆನ್ನು ನೋವು ಜಾಸ್ತಿಯಾಗಿರುವ ಕಾರಣ ಸದ್ಯಕ್ಕೆ ಎಂಆರ್ಐ, ಸ್ಕ್ಯಾನಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿ, ಎಕ್ಸಾಮಿನೇಷನ್ ನಲ್ಲಿ ಇರಿಸಿದೆ. ಈ ಸಂಬಂಧ ವಕೀಲರು ಹೈಕೋರ್ಟ್ ನ ಫೈಲಿಂಗ್ ಕೌಂಟರ್ ಗೆ ವರದಿ ಸಲ್ಲಿಸಿದ್ದಾರೆ.

ವೈದ್ಯರು ಹೈಕೋರ್ಟ್ ಗೆ ನೀಡಿರುವ ವರದಿ ಪ್ರಕಾರ ದರ್ಶನ್ ಅವರಿಗೆ ಈಗಾಗಲೇ ಚಿಕಿತ್ಸೆ ಶುರುವಾಗಿದ್ದು, ಎಲ್4, ಎಸ್1 ಗೆ ಫಿಸಿಯೋ ಥೆರಪಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಆದರೆ ಇದೆ ಚಿಕಿತ್ಸೆ ಅಂತಿಮ ಅಲ್ಲ. ಸರ್ಜರಿ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಸರ್ಜರಿಯ ಬಗ್ಗೆ ಸಂಪೂರ್ಣ ವಿವರನ್ನು ರೋಗಿಗೆ ನೀಡಲಾಗಿದೆ. ಅವರು ಒಪ್ಪಿದ ಬಳಿಕೆ ಸರ್ಜರಿ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಸರ್ಜರು ಮಾಡಬೇಕಾ ಅಥವಾ ಬೇಡವಾ ಎಂಬುದು ಆನಂತರ ನಿರ್ಧಾರ ಮಾಡುತ್ತೇವೆ. ಆತ ಒಪ್ಪಿದ ಬಳಿಕ ನೋಡಿ ತೀರ್ಮಾನ ಮಾಡುತ್ತೇವೆ ಎಂದು ದರ್ಶನ್ ಪರೀಕ್ಷೆ ಮಾಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಆ ವರದಿಯನ್ನು ವಕೀಲರು ಹೈಕೋರ್ಟ್ ಗೆ ತಲಯಪಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...