ಚಿತ್ರದುರ್ಗ ಫೆ. 19 : ಹಿರಿಯೂರಿನ 220 ಕೆಎಸ್ಆರ್ಎಸ್, 66/11 ಕೆ.ವಿ. ಭರಂಗಿರಿ, ಹಿಂಡಸಘಟ್ಟ, ಕಲಮರನಹಳ್ಳಿ, ಹರಿಯಬ್ಬೆ, ಕೆ.ಆರ್.ಹಳ್ಳಿ, ಪಿ.ಡಿ. ಕೋಟೆ ವಿದ್ಯುತ್ ಉಪಕೇಂದ್ರಗಳಲ್ಲಿ ಫೆ. 20 ರಂದುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಈ ಕೇಂದ್ರಗಳಿಂದ ವಿದ್ಯುತ್ ಸಂಪರ್ಕ ವ್ಯವಸ್ಥೆ ಇರುವ ವಿವಿಧ ಗ್ರಾಮಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಹಿರಿಯೂರಿನ 220 ಕೆಎಸ್ಆರ್ಎಸ್, 66/11 ಕೆ.ವಿ. ಭರಂಗಿರಿ, ಹಿಂಡಸಘಟ್ಟ, ಕಲಮರನಹಳ್ಳಿ, ಹರಿಯಬ್ಬೆ, ಕೆ.ಆರ್.ಹಳ್ಳಿ, ಪಿ.ಡಿ. ಕೋಟೆ ವಿದ್ಯುತ್ ಉಪಕೇಂದ್ರಗಳಲ್ಲಿ ಫೆ. 20 ರಂದುನಿರ್ವಹಣಾ ಕಾಮಗಾರಿ ಕೈಗೊಂಡಿರುವ ಕಾರಣ, ಈ ಕೇಂದ್ರಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವ ಹಿರಿಯೂರು ಗ್ರಾಮೀಣದ ಕೈಗಾರಿಕಾ ಪ್ರದೇಶಗಳಾದ ಅಕ್ಷಯ ಫುಡ್ ಪಾರ್ಕ್, ಹಬೀಬ್ ಸಾಲ್ವೆಂಟ್, ನಂದಶ್ರೀ, ಬಿ.ಜಿ.ಸಿ.ಎಲ್., ವಿ.ವಿ. ಕ್ರಾಸ್, ಲಕ್ಕವ್ವನಹಳ್ಳಿ, ದೊಡ್ಡಘಟ್ಟ, ಸೀಗೇಹಟ್ಟಿ, ಕೂನಿಕೆರೆ, ಬಬ್ಬೂರು, ತೋಟಗಾರಿಕಾ ವಿಶ್ವವಿದ್ಯಾನಿಲಯ, ಆದಿವಾಲ, ಆದಿವಾಲ ಫಾರಂ, ಪಟ್ರೆಹಳ್ಳಿ, ಬುರುಡುಕುಂಟೆ, ಯಳವಾರಹಟ್ಟಿ, ಹೊಸಹಳ್ಳಿ ಗುಳ್ಯಾ, ಗುಳ್ಯಾ ಗೊಲ್ಲರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ದಿಂಡಾವರ, ಹಿಂಡಸಘಟ್ಟೆ, ಉಡುವಳ್ಳಿ, ಘರಂಗಿರಿ, ಹರಿಹಬ್ಬೆ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ ಪಿಡಿ ಕೋಟೆ ಹಲಗಲದ್ದಿ, ಮದ್ದಿಹಳ್ಳಿ, ಮದ್ದಿಹಳ್ಳಿ ಗೊಲ್ಲರಹಟ್ಟಿ, ಶಾಂತಿನಗರ, ಖಂಡೇನಹಳ್ಳಿ, ಖಂಡೇನಹಳ್ಳಿ ಪಾಳ್ಯ, ಹೊಸಕೆರೆ, ಹೊಸಕೆರೆ ಪಾಳ್ಯ, ಬೇತೂರು, ಬೇತೂರು ಪಾಳ್ಯ, ಮಾರಮ್ಮನಹಳ್ಳಿ, ಕಣಜನಹಳ್ಳಿ, ಸೂಗೂರು, ಮುಂಸವವಳ್ಳಿ, ಕೃಷ್ಣಗಿರಿ, ವಿ.ಕೆ. ಗುಡ್ಡ, ಚಿಲ್ಲಹಳ್ಳಿ, ಯಶಗೊಂಡನಹಳ್ಳಿ, ಅಬ್ಬಿನಹೊಳೆ, ಈಶ್ವರಗೆರೆ, ಈಶ್ವರಗೆರೆ ಗೊಲ್ಲರಹಟ್ಟಿ, ಹೂವಿನಹೊಳೆ, ದೇವರಕೊಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಹೀಗಾಗಿ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸುವಂತೆ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











