ಚಿತ್ರದುರ್ಗ, ಜೂನ್, 26 : ನಗರದ ಕಲಾ ಕಾಲೇಜಿನ ಹಿಂಭಾಗದ ಕೆ. ಹೆಚ್. ಬಿ. ಬಡಾವಣೆಯ ವಾಸಿ ಮೃತ್ಯುಂಜಯ ಎಸ್. ಕೆಂಡದಮಠ(71 ವರ್ಷ) ಅವರು ಇಂದು ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿ ,ಓರ್ವ ಪುತ್ರ , ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಅವರ ಸ್ವಂತ ಊರಾದ ರಾಣೇಬೆನ್ನೂರಿನಲ್ಲಿ ಶುಕ್ರವಾರ ಸಂಜೆ ನಡೆಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರು, ಧಾರವಾಡ, ವಿಜಯಪುರ ಮತ್ತು ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಸಂಪರ್ಕ ಸಂಖ್ಯೆ : 7483068607







