Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿತ್ತಕ್ಕೆ ಸುಲಭದ ಮನೆ ಮದ್ದು ಇಲ್ಲಿದೆ.. ಒಮ್ಮೆ ಟ್ರೈ ಮಾಡಿ ಪಿತ್ತ ಮಂಗಮಾಯಾ..!

---Advertisement---

 

ಸುಮಾರು ಜನಕ್ಕೆ ತಲೆ ಸುತ್ತು, ಹುಳಿ ತೇಗು, ಆಗಾಗ ವಾಂತಿ ಬಂದಂತೆ ಆಗುವುದು ಆಗ್ತಾ ಇರುತ್ತೆ. ಅದಕ್ಕೆಲ್ಲಾ ಕಾರಣ ಪಿತ್ತ ಆಗಿರುವುದು. ಪಿತ್ತ ಅಲ್ವಾ ಆದ್ರೆ ಆಗ್ಲಿ, ಹೋದ್ರೆ ಹೋಗ್ಲಿ ಅಂತ ಸುಮ್ಮನೆ ಬಿಡುವಂತದ್ದು ಅಲ್ಲ. ಪಿತ್ತವನ್ನು ನೆಗ್ಲೆಕ್ಟ್ ಮಾಡಿದ್ರೆ ಇನ್ನಷ್ಟು ಬೇರೆ ಬೇರೆ ಕಾಯಿಲೆಗಳಿಗೆ ತಿರುಗುತ್ತಾ ಬರುತ್ತದೆ. ಹೀಗಾಗಿಯೇ ಯಾವುದೆ ಆರೋಗ್ಯ ಸಮಸ್ಯೆಯಾಗಲೀ ಅದನ್ನು ಆದಷ್ಟು ಬೇಗ ಸರಿ ಮಾಡಿಕೊಳ್ಳಬೇಕು.

ಅದರಲ್ಲೂ ಪಿತ್ತ ಆದರೆ ಊಟ ಮಾಡುವುದಕ್ಕೂ ಜಿಗುಪ್ಸೆ ಬಂದಂಗೆ ಆಗುತ್ತಾ ಇರುತ್ತದೆ. ಯಾವಾಗಲು ವಾಂತಿ ರೀತಿ ಫೀಲ್ ಆದರೆ ಊಟ ಸೇರುವುದಾದರೂ ಹೇಗೆ. ಪಿತ್ತ ಜಾಸ್ತಿಯಾದಷ್ಟೂ ಗ್ಯಾಸ್ಟ್ರಿಕ್‌ ಸಮಸ್ಯೆಯೂ ನಮ್ಮನ್ನು ಕಾಡಬಹುದು. ಹೀಗಾಗಿಯೇ ಆರೋಗ್ಯವನ್ನು ಆದಷ್ಟು ಚೆನ್ನಾಗಿ ನೋಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಇತ್ತಿಚಿನ ಲೈಫ್ ಸ್ಟೈಲ್ ನಿಂದಾಗಿಯೇ ನೂರೆಂಟು ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ. ಈ ಪಿತ್ತದ ಸಮಸ್ಯೆಗೆ ಮನೆ ಮದ್ದಿನಿಂದಾನೇ ಪರಿಹಾರ ಕಂಡುಕೊಳ್ಳಬಹುದು.

ಅಡುಗೆ ಮನೆಯಲ್ಲಿರುವಂತ ಪದಾರ್ಥವನ್ನೇ ಬಳಸಿ ಮೊದಲಿಗೆ ಒಂದು ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೇ ಹಣ್ಣನ್ನು ತೆಗೆದುಕೊಳ್ಳಿ. ಸ್ವಲ್ಪ ನೀರಿನಲ್ಲಿ ಅದನ್ನು ನೆನೆಸಿಡಿ. ಬಳಿಕ ಅದನ್ನು ಕೈಯಲ್ಲಿ ಕಿವುಚಿ, ರಸ ಮಾಡಿಕೊಳ್ಳಿ. ಒಂದು ಲೋಟಕ್ಕೆ ಆ ಹುಣಸೇ ರಸವನ್ನ ಜಾಲರದ ಮೂಲಕ ಸೋಸಿಕೊಳ್ಳಿ. ಯಾಕಂದ್ರೆ ಕೆಲವೊಂದು ಸಲ ಹುಣಸೇ ಹಣ್ಣಿನಲ್ಲಿ ಸಣ್ಣ ಸಣ್ಣ ಗಲೀಜು ಸೇರಿಕೊಂಡಿರುತ್ತದೆ. ಸೋಸಿಕೊಂಡ ರಸಕ್ಕೆ ಒಂದಷ್ಟು ನೀರನ್ನು ಬೆರೆಸಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು, ಸ್ವಲ್ಪ ಬೆಲ್ಲ ಬೆರೆಸಿ ಕುಡಿಯಿರಿ, ನಿಮ್ಮ ಪಿತ್ತದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಒಮ್ಮೆ ವೈದ್ಯರ ಬಳಿಯೂ ನಿಮ್ಮ ಪಿತ್ತದ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment