ರಾಜ್ಯಾದ್ಯಂತ ಜೋರು ಮಳೆ : ಅಕ್ಟೋಬರ್ 29ರವರೆಗೆ ಮಳೆಯ ಅಬ್ಬರ

1 Min Read

 

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡದಿಂದ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ವರದಿ ನೀಡಿದೆ. ಅಕ್ಟೋಬರ್ 29ರವರೆಗೆ ವ್ಯಾಪಕ ಮಳೆಯಾಗುವ ಸೂಚನೆ ನೀಡಿದೆ. ಕೆಲವೊಂದು ಕಡೆ ಉತ್ತಮ, ಕೆಲವೊಂದು ಕಡೆ ವ್ಯಾಪಕ, ಇನ್ನು ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

 

ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ ಮತ್ತು ಹಾಸನದಲ್ಲಿ ಆರೆಂಜ್​ ಅಲರ್ಟ್​ ಇರಲಿದೆ ಎಂದು ಹವಾಮಾನ ಇಲಾಖೆ ಘೊಷಿಸಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್​, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಬಳ್ಳಾರಿ ಮತ್ತು ವಿಜಯನಗರದಲ್ಲಿ ಮೋಡ ಕವಿದ ವಾತಾವಣರಣ ಅಥವಾ ತುಂತುರು ಮಳೆಯ ನಿರೀಕ್ಷೆ ಇದೆ.

ಮುಂದಿನ ಒಂದು ವಾರಗಳ ಕಾಲ ಜೋರು ಮಳೆಯಾಗಲಿದೆ. ಹೀಗಾಗಿ ಹವಮಾನ ಇಲಾಖೆ ಎಚ್ಚರದಿಂದ ಇರುವುದಕ್ಕೆ ಸೂಚನೆ ನೀಡಿದೆ. ರಾಜ್ಯಾದ್ಯಂತ ಇಂದು ಮಧ್ಯಾಹ್ನದಿಂದಾನೇ ಮಳೆಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ಸೋನೆ ಮಳೆ ಸುರಿಯುತ್ತಿದೆ. ದೀಪಾವಳಿ ಸಂಭ್ರಮದ ಜೊತೆಗೆ ಜಿಟಿಜಿಟಿ ಮಳೆ ಅಡ್ಡಿಯಾಗಿದೆ. ಬೆಳಗ್ಗೆಯಿಂದ ಪಟಾಕಿ ಹೊಡೆಯಬೇಕು ಎಂದುಕೊಂಡವರಿಗೆ ತೊಂದರೆ ಕೊಟ್ಟ ವರುಣ, ಸಂಜೆ ವೇಳೆಗೆ ದೀಪದ ಹಬ್ಬವನ್ನ ಸಂಭ್ರಮಿಸುವುದಕ್ಕೆ ದಾರಿ ಮಾಡಿಕೊಟ್ಟಿದೆ. ಮತ್ತೊಂದು ಕಡೆ ರೈತರಿಗೆ ಸಂತಸವಾಗಿದೆ. ಕೆಲವೆಡೆ ಹಿಂಗಾರು ಬಿತ್ತನೆ ಚುರುಕಾಗಿದೆ. ಮತ್ತೊಂದೆಡೆ ಸದ್ಯ ಒಣಗುತ್ತಿದ್ದ ಕೆಲವು ಬೆಳೆಗಳು ಹಸಿರಾಗುವುದಕ್ಕೆ ಮಳೆರಾಯ ಸಹಾಯ ಮಾಡಿದ್ದಾನೆ.

Share This Article
Enable Notifications OK No thanks