Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಘಿಬ್ಲಿ ಫೋಟೋಗೆ ನೀವೂ ಮಾರು ಹೋಗಿದ್ದೀರಾ..? ಇದು ಎಷ್ಟು ಡೇಂಜರ್ ಗೊತ್ತಾ..? ಸೈಬರ್ Expert ಹೇಳೋದೇನು..?

---Advertisement---

 

ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ಟ್ರೆಂಡ್ ಕ್ರಿಯೇಟ್ ಆಗ್ತಾ ಇರುತ್ತವೆ. ಆ ಟ್ರೆಂಡ್ ಬಿರುಗಾಳಿ ಬೀಸಿದಂತೆ ಹಬ್ಬಿ ಬಿಡುತ್ತದೆ. ಈಗ ಘಿಬ್ಲಿ ಫೋಟೋ ಆಗಿದ್ಯಲ್ಲ ಹಾಗೇ. ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ನಂದು ಒಂದು ಇರಲಿ ಎಂಬ ರೇಂಜಿಗೆ ಜನ ಘಿಬ್ಲಿ ಫೋಟೋಗಳನ್ನ ಅಪ್ಲೋಡ್ ಮಾಡ್ತಾ ಇದಾರೆ. ಸೈಬರ್ ಅಪರಾಧಗಳು ಹೆಚ್ಚಾಗಿರುವ ಈ ಕಾಲಕ್ಕೆ ಈ ಘಿಬ್ಲಿ ಫೋಟೋ ಕ್ರಿಯೇಟ್ ಮಾಡೋ ಅಪ್ಲಿಕೇಷನ್ ಎಷ್ಟು ಸೇಫ್ ಅನ್ನೋದು ಮಾತ್ರ ಸದ್ಯದ ಚರ್ಚಾ ವಿಷಯವಾಗಿದೆ.

ಘಿಬ್ಲಿ ಫೋಟೋವನ್ನು GPT4 ನಿಂದ ಮಾಡ್ತಾ ಇದಾರೆ. AI ಅಪ್ಲಿಕೇಶನ್ ಗೆ ಫೋಟೋಗಳನ್ನು ಅಪ್ಲೋಡ್ ಮಾಡ್ತಾ ಇರೋದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆಯೇ ಸರಿ ಎನ್ನುತ್ತಿದ್ದಾರೆ ಸೈಬರ್ ಎಕ್ಸ್ ಪರ್ಟ್ ಗಳು. ಆನ್ಲೈನ್ ಆಪ್ ಗಳಿಗೆ ಫೋಟೋ ಅಪ್ಲೋಡ್ ಮಾಡುವುದರಿಂದ ಸ್ಕ್ಯಾಮ್ ಮಾಡಿಬಿಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಅದು ಯಾವ ರೀತಿಯಲ್ಲಿ ಡೇಂಜರ್ ಅನ್ನೋದನ್ನು ತಜ್ಞರು ಹೇಳಿದ್ದಾರೆ ನೋಡಿ.

ಮೊದಲಿಗೆ ಘಿಬ್ಲಿ ಫೋಟೋ ಬೇಕು ಅಂದ್ರೆ ಚಾಟ್ ಬಾಕ್ಸ್ ನಲ್ಲಿ ಫೋಟೋ ಅಪ್ಲೋಡ್ ಮಾಡಬೇಕು. ಕೆಲ ಆ್ಯಪ್ ಗಳು ಸೈನ್ ಅಪ್ ಕೇಳುತ್ತವೆ. ಆಗ ನಿಮ್ಮ ಲಾಗಿನ್ ಸುಲಭವಾಗಿ ಆಪ್ ಹ್ಯಾಂಡಲ್ ಮಾಡುವವರಿಗೆ ಸಿಗುತ್ತದೆ. ಬಳಿಕ ಓಪನ್ ಎಐ ಅನುಮತಿ ನೀಡುತ್ತೆ. ಆಗ ಗ್ಯಾಲರಿಯಲ್ಲಿ ಫೋಟೋ ಆಯ್ಕೆ ಮಾಡಿಕೊಳ್ಳುವ ಆಪ್ಶನ್ ಕೊಟ್ಟಿರುತ್ತೀರಾ. ಇದರಿಂದ ಪರ್ಸನಲ್ ಡೇಟಾ, ಪರ್ಸನಲ್ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಸುಮಾರು ಜನ ಇದರಿಂದ ಪರಿಣಾಮ ಅನುಭವಿಸಿದ್ದಾರೆ. ಹೀಗಾಗಿ ಘಿಬ್ಲಿ ಟ್ರೆಂಡ್ ಮೊರೆ ಹೋಗುವ ಮುನ್ನ ಎಚ್ಚರದಿಂದ ಇರಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment