Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಾಹಿತ್ಯ ಪರಂಪರೆಯಲ್ಲಿ ಗುರುನಾಥ್‍ ಮೇರು ವ್ಯಕ್ತಿತ್ವದವರು :   ಡಾ.ಎನ್.ಎಸ್.ಮಹಾಂತೇಶ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.12 : ಡಾ.ರಾಜ್‍ಕುಮಾರ್ ತಮ್ಮಲ್ಲಿರುವ ಅಗಾಧವಾದ ಕಲೆಯ ಮೂಲಕ ಮೇರು ನಟ ಎನಿಸಿಕೊಂಡು ಕನ್ನಡದ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಇಂದಿಗೂ ಉಳಿದಿದ್ದಾರೆಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಾಂತೇಶ್ ತಿಳಿಸಿದರು.

ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್, ಸಮತಾ ಸಾಹಿತ್ಯ ವೇದಿಕೆ ಸಂಯುಕ್ತಾಶ್ರಯದಲ್ಲಿ ಎಸ್.ಆರ್.ಗುರುನಾಥ್‍ರವರ ಸಂಶೋಧನಾ ಸಾಹಿತ್ಯ ಪರಿಚಯ, ಪರಿಷತ್ ಶಾಖೆಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಚಲನಚಿತ್ರ ಮೇರು ನಟಿ ಲೀಲಾವತಿರವರ ಸವಿನೆನಪು ರಾಜ್ಯ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮ  ಸನ್ಮಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ಸಾಹಿತ್ಯ ಪರಂಪರೆಯಲ್ಲಿ ಗುರುನಾಥ್‍ರವರದು ಮೇರು ವ್ಯಕ್ತಿತ್ವ. ಅವರ ಸಾಹಿತ್ಯ  ಓದಿದವರಿಗೆ ಮಾತ್ರ ಬರವಣಿಗೆ ಎಷ್ಟು ಸೂಕ್ಷ್ಮವಾಗಿತ್ತು ಎನ್ನುವುದು ಗೊತ್ತಾಗುತ್ತದೆ. ದಲಿತ, ಅಸ್ಪøಶ್ಯ ಸಮಾಜದಿಂದ ಬಂದ ಎಸ್.ಆರ್.ಗುರುನಾಥ್ ಜೀವನದಲ್ಲಿ ಎಲ್ಲವನ್ನು ಮೆಟ್ಟಿ ನಿಂತು ಬರವಣಿಗೆಯಲ್ಲಿ ಹೆಚ್ಚು ಪ್ರಸಿದ್ದಿ ಪಡೆದರು. ಸುಮಾರು ಹದಿನೇಳು ಕೃತಿಗಳನ್ನು ರಚಿಸಿರುವ ಅವರು ಐವತ್ತು ವರ್ಷಗಳಿಂದಲೂ ಸಾಹಿತ್ಯದಲ್ಲಿ ಸೇವೆ ಸಲ್ಲಿಸಿದ್ದಾರೆಂದು ಗುಣಗಾನ ಮಾಡಿದರು.

ಕಥೆ, ಕಾದಂಬರಿ, ಲೇಖನ, ಕವನ, ಸಂಶೋಧನಾ ಸಾಹಿತ್ಯ ಅವರದು. ಸರಳ ಸಾತ್ವಿಕ ವ್ಯಕ್ತಿವುಳ್ಳವರಾಗಿದ್ದ ಎಸ್.ಆರ್.ಗುರುನಾಥ್‍ರವರಲ್ಲಿ ಇನ್ನು ಹೆಚ್ಚಿನ ವಿಚಾರ ತಿಳಿದುಕೊಳ್ಳಬೇಕೆನ್ನುವ ಹಂಬಲವಿತ್ತು. ಕಿಚ್ಚು, ಹೋರಾಟ, ಪ್ರತಿಭಟನೆ ಎಲ್ಲವನ್ನು ಬರವಣಿಗೆ ಮೂಲಕ ಹೊರ ಹಾಕಿದವರು ಎಂದು ಸ್ಮರಿಸಿದರು.

ಕಿರುತೆರೆ ನಟಿ ಶ್ರೀಮತಿ ಇಂದ್ರಸುಧಾ ಮಾತನಾಡಿ ಕಲಾವಿದರ ಬದುಕು ನಿಜವಾಗಿಯೂ ಸಂಕಷ್ಟದಲ್ಲಿದೆ. ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಜೊತೆಗೆ ಸಾರ್ವಜನಿಕರು ಸಹಕರಿಸಿದಾಗ ಮಾತ್ರ ಕಲಾವಿದರು ಬದುಕುಳಿಯಲು ಸಾಧ್ಯ. ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ಕಲೆಯ ಉಳಿವಿಗಾಗಿ ಹಿಂದಿನಿಂದಲೂ ಶ್ರಮಿಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐ.ಎ.ಎಸ್. ಕೆ.ಎ.ಎಸ್. ತರಬೇತಿದಾರರು ರಾಷ್ಟ್ರೀಯ ವಿಶ್ವಕರ್ಮ ವಂಶಿಸೇನೆಯ ಜಿಲ್ಲಾಧ್ಯಕ್ಷೆ ಪಿ.ಜೆ.ಅನಿತಾಲಕ್ಷ್ಮಿ ಆಚಾರ್ಯ ಮಾತನಾಡುತ್ತ ನಟಿ ಲೀಲಾವತಿ ಸವಿ ನೆನಪು ಕಾರ್ಯಕ್ರಮದ ಮೂಲಕ ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ಹೊಸ ಹೆಜ್ಜೆ ಇಡುತ್ತಿದೆ. ಡಾ.ರಾಜ್‍ಕುಮಾರ್ ಕಲೆಯ ಗ್ರಂಥಾಲಯವಿದ್ದಂತೆ. ಅವರ ಪುತ್ರ ಪುನಿತ್‍ರಾಜ್‍ಕುಮಾರ್ ಕೂಡ ಚಿಕ್ಕವಯಸ್ಸಿಗೆ ಅಪಾರ ಅಭಿಮಾನಿಗಳ ಮನಗೆದ್ದು ಎಲ್ಲರನ್ನು ಬಿಟ್ಟು ಅಗಲಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಕಲಾವಿದರ ಜೀವನ ಕಷ್ಟದಲ್ಲಿದೆ. ಸರ್ಕಾರ ಕಲೆಯನ್ನು ಉಳಿಸಿ ಬೆಳೆಸಬೇಕು. ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸರ್ಕಾರ ಪ್ರತಿ ವರ್ಷವೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದಕ್ಕೆ ಅರವತ್ತು ವರ್ಷ ವಯಸ್ಸಿನ ಮಾನದಂಡ ವಿಧಿಸಿರುವುದು ಸರಿಯಲ್ಲ. ವಯಸ್ಸಿಗೆ ಬದಲಾಗಿದೆ ಕಲೆ, ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು.

ಕಲಾವಿದರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಧನ ಸಹಾಯ ನೀಡಬೇಕು. ಬೆಳ್ಳಿ ತೆರೆಯ ನಟ-ನಟಿಯರು ಮಾತ್ರ ಬೇಗ ಬೆಳಕಿಗೆ ಬರುತ್ತಾರೆ. ಗ್ರಾಮೀಣ ಭಾಗದ ಸೋಭಾನೆ, ಜಾನಪದ ಕಲಾವಿದರನ್ನು ಯಾರು ಗುರುತಿಸುವುದಿಲ್ಲ. ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರವರನ್ನು ಉಳಿಸಬೇಕಿದೆ ಎಂದು ಹೇಳಿದರು.

ಕರ್ನಾಟಕ ರತ್ನ ಡಾ.ರಾಜ್‍ಕುಮಾರ್ ಸಾಂಸ್ಕøತಿಕ ಕಲಾ ಪರಿಷತ್ ರಾಜ್ಯಾಧ್ಯಕ್ಷ ಕೆ.ಪರಶುರಾಮ್ ಗೊರಪ್ಪರ್ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಡೀನ್ ಡಾ.ಹೆಚ್.ಶಿವಣ್ಣ, ಸಮತಾ ಸಾಹಿತ್ಯ ವೇದಿಕೆ ಅಧ್ಯಕ್ಷ ಓ.ವೆಂಕಟೇಶ್‍ನಾಯ್ಕ, ಆರ್.ತಿಪ್ಪೇಸ್ವಾಮಿ, ಹೆಚ್.ಸಿ.ದಿವುಶಂಕರ್, ಶ್ರೀಮತಿ ಜೆ.ಆಶಾ, ಶ್ರೀಮತಿ ಸೌಭಾಗ್ಯ ಮುಸ್ಟುಗೇರಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಂದು ಟೀಂ ಇಂಡಿಯಾದ ಉಪನಾಯಕನಾಗಿದ್ದ ಕೆ ಎಲ್ ರಾಹುಲ್ ಈ ಬಾರಿ ತಂಡದಿಂದಾನೇ ಔಟ್..!

ಟ20 ವೇಳೆ ಶ್ವಕಪ್ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದ್ದಿ, ಕನ್ನಡಿಗ ಕೆ ಎಲ್ ರಾಹುಲ್ ಗೆ ಸ್ಥಾನವನ್ನೇ ನೀಡಿಲ್ಲ. ತಂಡಿದಿಂದ ಹೊರಗೆ ಉಳಿದಿದ್ದಾರೆ. ಈ ಬಾರಿಯ ಐಪಿಎಲ್ ಮ್ಯಾಚ್ ನೆಲ್ಲಾ ಯಾರೆಲ್ಲಾ ಉತ್ತಮ ಪ್ರದರ್ಶ‌

ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಹಾಗೂ ರೇವಣ್ಣರಿಗೆ ನೋಟೀಸ್ ನೀಡಿದ ಎಸ್ಐಟಿ..!

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ವಿಡಿಯೋದಲ್ಲಿ ಗುರುತು ಸಿಕ್ಕವರನ್ನು ಕರೆಸಿ , ವಿಚಾರಣೆ ನಡೆಸುತ್ತಿದ್ದಾರೆ. ರಾಜಕೀಯ ನಾಯಕರ ಕೆಸೆರೆಚಾಟದ ನಡುವೆ ತನಿಖೆ ತೀವ್ರಗೊಂಡಿದೆ. ಎಡಿಜಿಪಿ ಬಿಜಯ್

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

error: Content is protected !!