ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 23 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಂಡವಾಳಶಾಹಿಗಳ ಮತ್ತು ಕಾರ್ಪೊರೇಟ್ ಕಂಪನಿಗಳ ಗುಲಾಮಗಿರಿ ಕೆಲಸ ಮಾಡುತ್ತಿರುವುದರಿಂದ ಕೃಷಿ ಕ್ಷೇತ್ರ ದಿವಾಳಿ ಹಂತಕೆ ತಲುಪಿದೆ. ಇದರಿಂದ ಕೃಷಿ ಮಾಡುವ ರೈತರು ಆತ್ಮಹತ್ಯೆಗಳು ಸರಣಿಯಲ್ಲಿ ನಡೆಯುತ್ತಿದ್ದರೂ ಸಹ ರಾಜಕಾರಣಿಗಳು ಇದರ ಬಗ್ಗೆ ಗಮನಹರಿಸದೆ ಕಣ್ಣು ಮುಚ್ಚಿ ಕುಳಿತಿದ್ದಾರೆ. ಆದ್ದರಿಂದ ರೈತರು ನಾವೆಲ್ಲರೂ ಎಚ್ಚೆತ್ತುಕೊಂಡು ಸರ್ಕಾರಗಳಿಗೆ ಎಚ್ಚರಿಕೆ ನೀಡಲೇಬೇಕಾದ ಅನಿವಾರ್ಯತೆಯಿಂದಾಗಿ ಅಕ್ಟೋಬರ್ 27 ರ ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ರೈತರ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ರೈತ ಮುಖಂಡರ ಅಷ್ಟೇ ಅಲ್ಲದೆ ಪ್ರತಿಯೊಬ್ಬ ರೈತರು, ವಿವಿಧ ಸಂಘ ಸಂಸ್ಥೆಯ ಬಂಧುಗಳು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಭಾಗವಹಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಇಂದು ಅಖಂಡ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ಶಾಖೆ ಇವರ ವತಿಯಿಂದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ,.ಈಗಾಗಲೇ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಮಳೆ ಬಾರದೆ ಬೆಳೆಗಳಿ ನಷ್ಟ ವಾಗಿದ್ದು ಈ ತಾಲ್ಲೂಕುಗಳು ಬರದ ಪ್ರದೇಶವಾಗಿದ್ದು ತಾಲೂಕುಗಳನ್ನ ಬರದ ತಾಲೂಕ ಎಂದು ಘೋಷಣೆ ಮಾಡಬೇಕು.
ಸೇರಿದಂತೆ ವಿವಿಧ ಬೇಡಿಕೆಗಳನ್ನ ಇಡೇರಿಸುವಂತೆ ಒತ್ತಾಯಿಸಿ ಬೃಹತ್ ಚಳುವಳಿಯನ್ನು ನಡೆಸುತ್ತೇವೆ . ನಗರದ ಪಾವಗಡ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಂತ ಹೊರಟ ಪ್ರತಿಭಟನೆ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.
ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ ಈಗಾಗಲೇ ಬೆಳೆ ನಷ್ಟವಾಗಿ ಅನ್ನದಾತರು ಸಂಕಷ್ಟದಲ್ಲಿ ಇದ್ದಾರೆ .ಅಷ್ಟೇ ಅಲ್ಲದೆ ಸಾಲ ಸೋಲ ಮಾಡಿ ಬೆಳೆ ವಿಮೆಯನ್ನು ಕಟ್ಟಿದ್ದಾರೆ. ಬೆಳೆ ಪರಿಹಾರ ಬೆಳೆ ವಿಮೆ ಕೂಡಲೇ ವಿತರಣೆ ಮಾಡಬೇಕು ಇಲ್ಲಾವಾದರೆ ವಿಧಾನಸೌಧಕ್ಕೆ ರೈತ ಸಂಘದಿಂದ ಮುತ್ತಿಗೆ ಹಾಕುತ್ತೇವೆ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರಕಾಶ್ ಎಚ್ ಶ್ರೀಕಂಠಮೂರ್ತಿ, ಶಾಂತಣ್ಣ, ರಾಜಣ್ಣ, ಹನುಮಂತರಾಯ, ತಿಪ್ಪೇಸ್ವಾಮಿ, ಓಬಳೇಶ, ಹನುಮಂತರಾಯ, ನಾಗರಾಜ. ಸೇರಿದಂತೆ ರೈತ ಮುಖಂಡರು ಇದ್ದರು.










