Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ ಜಿಲ್ಲೆಯಾದ್ಯಂತ 2,134 ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ : 7 ಅತಿಸೂಕ್ಷ್ಮ, 114 ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

---Advertisement---

 

 

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಜಿಲ್ಲೆಯ ಆರು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಿನಾಂಕ:14.09.2026 ರಂದು ಒಟ್ಟು 07 ಅತಿ ಸೂಕ್ಷ್ಮ, 114 ಸೂಕ್ಷ್ಮ, 2013 ಸಾಮಾನ್ಯ ಒಟ್ಟು 2134 ಗಣೇಶ ಮೂರ್ತಿಗಳು ಪ್ರತಿಷ್ಟಾಪನೆಗೊಂಡಿರುತ್ತವೆ.

 

ಗಣೇಶ ಮೂರ್ತಿಗಳ ಪೈಕಿ 3ನೇ ದಿನದಂದು ಒಟ್ಟು 1170 ಗಣಪತಿಗಳು, 5ನೇ ದಿನದಂದು 542 ಗಣಪತಿಗಳು. 6ನೇ ದಿನದಂದು 49 ಗಣಪತಿಗಳು, 7ನೇ ದಿನದಂದು 93 ಗಣಪತಿಗಳು, 8ನೇ ದಿನದಂದು 27 ಗಣಪತಿಗಳು. 9ನೇ ದಿನದಂದು 87 ಗಣಪತಿ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಜಿಲ್ಲೆಯಲ್ಲಿ ಕೊನೆಯದಾಗಿ ದಿನಾಂಕ:14.10.2026 ರಂದು ಹಿರಿಯೂರು ನಗರದಲ್ಲಿನ ಶಕ್ತಿ ಗಣಪತಿ ಮೂರ್ತಿಯ ವಿಸರ್ಜನೆಯಾಗಲಿದೆ.

ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ಚಿತ್ರದುರ್ಗ ನಗರ. ಭರಮಸಾಗರ, ಹೊಳಲ್ಕೆರೆ ಪಟ್ಟಣ, ಹೊಸದುರ್ಗ ಪಟ್ಟಣ, ಹಿರಿಯೂರು ನಗರ, ಚಳ್ಳಕೆರೆ ನಗರ, ನಾಯಕನಹಟ್ಟಿ ಪಟ್ಟಣ. ಮೊಳಕಾಲ್ಕೂರು ಪಟ್ಟಣಗಳಲ್ಲಿ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾ ಗಣಪತಿಗಳನ್ನು ಅತಿಸೂಕ್ಷ್ಮ ಗಣಪತಿಗಳೆಂದು ಗುರುತಿಸಲಾಗಿದೆ.

ದಿನಾಂಕ:20.09.2026 ರಂದು ಮೊಳಕಾಲ್ಕೂರು ಪಟ್ಟಣದಲ್ಲಿ, ದಿನಾಂಕ:21.09.2026ರಂದು ಭರಮಸಾಗರ ಗ್ರಾಮದಲ್ಲಿ, ದಿನಾಂಕ:22.09.2026 ರಂದು ನಾಯಕನಹಟ್ಟಿ ಪಟ್ಟಣದಲ್ಲಿ, 24.09.2026 ರಂದು ಚಳ್ಳಕೆರೆ ನಗರದಲ್ಲಿ 26.09.2026 ರಂದು ಹೊಸದುರ್ಗ ಮತ್ತು ಹೊಳಲ್ಕೆರೆ ಪಟ್ಟಣದಲ್ಲಿ. ದಿನಾಂಕ:03.10.2026 ರಂದು ಚಿತ್ರದುರ್ಗ ನಗರದಲ್ಲಿ ಶೋಭಾಯಾತ್ರೆ ನಡೆಸಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ.

ಈ ಬಗ್ಗೆ ಜಿಲ್ಲೆಯಾದ್ಯಾಂತ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿರುತ್ತದೆ ಎಂದು ಚಿತ್ರದುರ್ಗ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now