ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಮಳೆಗಾಲ ಬಂತು ಅಂದ್ರೆ ಸೊಳ್ಳೆಯ ಕಾಟ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಶುರುವಾಗುವ ಸಮಸ್ಯೆ ಒಂದಿಷ್ಟಲ್ಲ. ಅದರಲ್ಲೂ ಈ ಮಳೆಗಾಲದಲ್ಲಿ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತ ಮಾರಕ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಮಳೆಗಾಲ ಅಷ್ಟೇ ಅಲ್ಲ ಮನೆಯ ಬಳಿ ನಿಂತ ನೀರಿನಿಂದಾನೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರಿಂದಾನೂ ಡೆಂಗ್ಯೂ ಬರುತ್ತದೆ.
ಡೆಂಗ್ಯೂ ಬಂದರೆ ವಾಸಿಯಾಗದಂತ ಕಾಯಿಲೆ ಏನು ಅಲ್ಲ. ಆದರೆ ಅದು ವಾಸಿಯಾದ ಮೇಲೂ ದೇಹದ ಮೇಲೆ ನೂರೆಂಟು ಪರಿಣಾಮ ಬೀರುತ್ತದೆ. ದೇಹಕ್ಕೆ ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ಡೆಂಗ್ಯೂ ಬರುವುದಕ್ಕೂ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.
ಡೆಂಗ್ಯೂ ಜ್ವರ ಬಂದಾಗ ಚಳಿಜ್ವರ, ಅತ್ಯಧಿಕ ತಲೆನೋವು, ವಾಂತಿ, ಬೇಧಿ, ಸುಸ್ತು ಹೀಗೆ ಹಲವು ಲಕ್ಷ್ಮಣಗಳು ಕಂಡು ಬರುತ್ತವೆ. ತಕ್ಷಣ ಅದನ್ನು ಅರಿತು ಚಿಕಿತ್ಸೆ ಪಡೆದರು, ಗುಣವಾದ ಮೇಲೆ ಅಡ್ಡ ಪರಿಣಾಮಗಳು ದೇಹಕ್ಕೆಕಾಡುವುದಕ್ಕೆ ಆರಂಭಿಸುತ್ತವೆ. ಅದರಲ್ಲಿ ದೇಹಕ್ಕೆ ತುಂಬಾ ದಿನಗಳವರೆಗೂ ಸುಸ್ತು ಕಾಡುತ್ತದೆ. ಸ್ವಲ್ಪ ನಡೆದಾಡಿದರೂ ಸುಸ್ತಾಗುತ್ತದೆ. ಇನ್ನು ಡೆಂಗ್ಯೂವಿನಿಂದ ಬಳಲಿದವರಿಗೆ ಕೂದಲು ಉದುರುವುದಕ್ಕೆ ಶುರುವಾಗುತ್ತದೆ. ಡೆಂಗ್ಯೂ ಬಂದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಕೆಲವರಲ್ಲಿ alopecia ಅಂದರೆ ಕೂದಲು ಕೆಲವು ಕಡೆ ಸಂಪೂರ್ಣವಾಗಿ ಪ್ಯಾಚ್-ಪ್ಯಾಚ್ ಉಂಟಾಗುವುದು.
ಡೆಂಗ್ಯೂ ಬಂದರೆ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆಯಾಗುವುದು. 5-6 ತಿಂಗಳಾದರೂ ಈ ರೀತಿ ನೋವು ಕೆಲವರಿಗೆ ಕಾಡುವುದು. ದೇಹದಲ್ಲಿ ಪೋಷಕಾಂಶದ ಕೊರತೆ ಇರುತ್ತದೆ, ಇದರಿಂದಾಗಿ ಸಂಧಿವಾತ ಸಮಸ್ಯೆ ಉಂಟಾಗುವುದು. ಹೀಗಾಗಿ ಆದಷ್ಟು ಡೆಂಗ್ಯೂ ಬಾರದಂತೆ ನಿಮ್ಮಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್