Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡೆಂಗ್ಯೂವಿನಿಂದ ಆರೋಗ್ಯ ಸರಿಯಾದರೂ ಅಡ್ಡಪರಿಣಾಮ ಇದ್ದೆ ಇರುತ್ತೆ.. ಹೀಗಾಗಿ ಮೊದಲೆ ಎಚ್ಚೆತ್ತುಕೊಳ್ಳಿ..!

Facebook
Twitter
Telegram
WhatsApp

 

 

ಮಳೆಗಾಲ ಬಂತು ಅಂದ್ರೆ ಸೊಳ್ಳೆಯ ಕಾಟ ಹೆಚ್ಚಾಗುತ್ತದೆ. ಸೊಳ್ಳೆಗಳಿಂದ ಶುರುವಾಗುವ ಸಮಸ್ಯೆ ಒಂದಿಷ್ಟಲ್ಲ. ಅದರಲ್ಲೂ ಈ ಮಳೆಗಾಲದಲ್ಲಿ ಕಚ್ಚುವ ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾದಂತ ಮಾರಕ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಮಳೆಗಾಲ ಅಷ್ಟೇ ಅಲ್ಲ ಮನೆಯ ಬಳಿ ನಿಂತ ನೀರಿನಿಂದಾನೂ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅದರಿಂದಾನೂ ಡೆಂಗ್ಯೂ ಬರುತ್ತದೆ.

ಡೆಂಗ್ಯೂ ಬಂದರೆ ವಾಸಿಯಾಗದಂತ ಕಾಯಿಲೆ ಏನು ಅಲ್ಲ. ಆದರೆ ಅದು ವಾಸಿಯಾದ ಮೇಲೂ ದೇಹದ ಮೇಲೆ ನೂರೆಂಟು ಪರಿಣಾಮ ಬೀರುತ್ತದೆ. ದೇಹಕ್ಕೆ ಸಮಸ್ಯೆಯಾಗಿ ಕಾಡುತ್ತದೆ. ಹೀಗಾಗಿ ಡೆಂಗ್ಯೂ ಬರುವುದಕ್ಕೂ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.

ಡೆಂಗ್ಯೂ ಜ್ವರ ಬಂದಾಗ ಚಳಿಜ್ವರ, ಅತ್ಯಧಿಕ ತಲೆನೋವು, ವಾಂತಿ, ಬೇಧಿ, ಸುಸ್ತು ಹೀಗೆ ಹಲವು ಲಕ್ಷ್ಮಣಗಳು ಕಂಡು ಬರುತ್ತವೆ. ತಕ್ಷಣ ಅದನ್ನು ಅರಿತು ಚಿಕಿತ್ಸೆ‌ ಪಡೆದರು, ಗುಣವಾದ‌ ಮೇಲೆ ಅಡ್ಡ ಪರಿಣಾಮಗಳು ದೇಹಕ್ಕೆ‌ಕಾಡುವುದಕ್ಕೆ ಆರಂಭಿಸುತ್ತವೆ. ಅದರಲ್ಲಿ ದೇಹಕ್ಕೆ ತುಂಬಾ ದಿನಗಳವರೆಗೂ ಸುಸ್ತು ಕಾಡುತ್ತದೆ. ಸ್ವಲ್ಪ ನಡೆದಾಡಿದರೂ ಸುಸ್ತಾಗುತ್ತದೆ. ಇನ್ನು ಡೆಂಗ್ಯೂವಿನಿಂದ ಬಳಲಿದವರಿಗೆ ಕೂದಲು ಉದುರುವುದಕ್ಕೆ ಶುರುವಾಗುತ್ತದೆ. ಡೆಂಗ್ಯೂ ಬಂದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಕೆಲವರಲ್ಲಿ alopecia ಅಂದರೆ ಕೂದಲು ಕೆಲವು ಕಡೆ ಸಂಪೂರ್ಣವಾಗಿ ಪ್ಯಾಚ್-ಪ್ಯಾಚ್ ಉಂಟಾಗುವುದು.

ಡೆಂಗ್ಯೂ ಬಂದರೆ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆಯಾಗುವುದು. 5-6 ತಿಂಗಳಾದರೂ ಈ ರೀತಿ ನೋವು ಕೆಲವರಿಗೆ ಕಾಡುವುದು. ದೇಹದಲ್ಲಿ ಪೋಷಕಾಂಶದ ಕೊರತೆ ಇರುತ್ತದೆ, ಇದರಿಂದಾಗಿ ಸಂಧಿವಾತ ಸಮಸ್ಯೆ ಉಂಟಾಗುವುದು. ಹೀಗಾಗಿ ಆದಷ್ಟು ಡೆಂಗ್ಯೂ ಬಾರದಂತೆ ನಿಮ್ಮ‌ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ?

ನಿಮ್ಮದೇ ರಾಶಿ ಹೊಂದಿರುವರು ಶ್ರೀಮಂತರಾಗಿದ್ದಾರೆ, ಸರಕಾರಿ ಉದ್ಯೋಗದಲ್ಲಿದ್ದಾರೆ ನೀವೇಕೆ ಇಲ್ಲ? ಶನಿವಾರ ರಾಶಿ ಭವಿಷ್ಯ -ಮೇ-4,2024 ಸೂರ್ಯೋದಯ: 05:52, ಸೂರ್ಯಾಸ್ತ : 06:33 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

error: Content is protected !!
Fatal error: Out of memory (allocated 46137344) (tried to allocate 655360 bytes) in /home/nagendra/public_html/wp-includes/option.php on line 617