Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಿಚ್ಚ ಸುದೀಪ್ ಅವರಿಗೆ ಕೊಟ್ಟ ಎರಡನೇ ಮಾತನ್ನು ನೆರವೇರಿಸಿದ ಡ್ರೋನ್ ಪ್ರತಾಪ್

Facebook
Twitter
Telegram
WhatsApp

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರಲ್ಲಿ ಈ ಬಾರಿ ಡ್ರೋನ್ ಪ್ರತಾಪ್ ಕೂಡ ಕಂಟೆಸ್ಟೆಂಟ್ ಆಗಿ ಬಂದಿದ್ದರು. ನೂರೆಂಟು ಆರೋಪಗಳನ್ನು ಹೊತ್ತು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ದಿನ ಕಳೆದಂತೆ ಪ್ರತಾಪ್ ಮುಗ್ಧತೆಗೆ ಜನ ಮರುಳಾಗಿದ್ದರು. ಹೀಗಾಗಿಯೇ ಜನರ ಮನಗೆದ್ದು ಫಸ್ಟ್ ರನ್ನರ್ ಅಪ್ ಆಗಿ ಹೊರ ಬಂದಿದ್ದರು.

ಅಂದು ಕಿಚ್ಚನ ವೇದಿಕೆಯಲ್ಲಿ ರನ್ನರ್ ಅಪ್ ಆದಾಗ ಹಲವು ಪ್ರಾಮೀಸ್ ಗಳನ್ನು ಮಾಡಿದ್ದರು. ಬಂದಂತಹ ಬಹುಮಾನದ ಹಣವನ್ನು ಅಗತ್ಯ ಇರುವ ಜನರಿಗೆ ಕೊಡುತ್ತೇನೆ ಎಂದಿದ್ದರು. ಅದರಂತೆ ಬೌನ್ಸ್ ಗಾಡಿಯನ್ನು ಫುಡ್ ಡೆಲಿವರಿ ಮಾಡುವ ಹುಡುಗನಿಗೆ ನೀಡಿದ್ದರು. ಇದೀಗ ಬಂದಂತ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದ್ದಾರೆ.

ಬ್ಯುಸಿನೆಸ್​ನಲ್ಲಿ ಹಣ ಕಳೆದುಕೊಂಡ ಕುಟುಂಬ ಕಷ್ಟದ ದಿನಗಳನ್ನ ಕಳೆಯುತ್ತಿತ್ತು. ಆ ಕುಟುಂಬದ ಬಗ್ಗೆ ತಿಳಿದುಕೊಂಡ ಪ್ರತಾಪ್​ ಇಬ್ಬರೂ ಹೆಣ್ಣು ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ಎಷ್ಟೋ ಭರವಸೆಗಳನ್ನ ಮರೆಯುವ ಈ ಕಾಲದಲ್ಲಿ ಮೂವರ ಬದುಕಿಗೆ ಆಸರೆ ಆಗಿದ್ದಾರೆ ಡ್ರೋನ್​​ ಪ್ರತಾಪ್​. ಅವರ ಈ ಕಾರ್ಯಕ್ಕೆ ಅಪಾರ ಜನಮನ್ನಣೆ ಸಿಗುತ್ತಿದೆ. ಇದಕ್ಕಿಂತ ಸಾರ್ಥಕತೆ ಇನ್ನೇನಿದೆ ಅಲ್ವಾ? ಇನ್ನೂ ಈ ವಿಡಿಯೋ ನೋಡಿದ ನೆಟ್ಟಿಗರು ತನ್ನ ಕಷ್ಟವನ್ನು ಬದಿಗಿಟ್ಟು ಪರರ ಕಷ್ಟಗಳಿಗೆ ಸ್ವಂದಿಸುವ ಗುಣ ನಿಮ್ಮದು, ನಿಮ್ಮಿಂದ ನೋಡಿ ಕಲಿಯಲಿಕ್ಕೆ ಸಾಕಷ್ಟಿದೆ ಎಂದು ಡ್ರೋನ್ ಪ್ರತಾಪ್ ಬಗ್ಗೆ ಪಾಸಿಟಿವ್ ಆಗಿ ಕಮೆಂಟ್ ಹಾಕುತ್ತಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಕಲರ್ಸ್ ಕನ್ನಡದಲ್ಲಿಯೇ ಮನರಂಜನೆ ನೀಡುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿಯಲ್ಲಿ ಕಾಮಿಡಿ ಮಾಡುತ್ತಾ ನಗಿಸುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಾವಣಗೆರೆ, ಶಿರಸಿಯಲ್ಲಿ ಮೋದಿ ಮತಬೇಟೆ : ಬೆಳಗಾವಿಯಿಂದ ಆರಂಭ

ಬೆಳಗಾವಿ: ಈಗಾಗಲೇ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಜನತೆ ರೆಡಿಯಾಗಿದ್ದಾರೆ. ಈಗಾಗಲೇ ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದು, ನಾಳೆಯೂ ರಾಜ್ಯ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ : ವಿಶೇಷ ತನಿಖಾ ತಂಡ ರಚನೆಗೆ ಸಿಎಂ ನಿರ್ಧಾರ

ಬೆಂಗಳೂರು: ಹಾಸನದಲ್ಲಿ ಕಳೆದ ಕೆಲವು ದಿನಗಳಿಂದ ಪೆನ್ ಡ್ರೈವ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಆ ಪೆನ್ ಡ್ರೈವ್ ನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಇರುವುದು ಬೆಳಕಿಗೆ ಬಂದಿದೆ. ಅದು ಒಂದಲ್ಲ ಎರಡಲ್ಲ ಸಾವಿರಾರು

ಶೇಂಗಾವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿಂದರೆ ಏನೆಲ್ಲಾ ಲಾಭ ಸಿಗುತ್ತೆ..?

ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತಾನೇ ಎನ್ನುತ್ತಾರೆ. ಕಡಲೆಕಾಯಿ ಬೀಜದಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ ಅಂಶಗಳು ಇರುತ್ತೆ. ಹಸಿ ಕಡಲೆಕಾಯಿ ಬೀಜವನ್ನು ಹಾಗೇ ತಿನ್ನುವುದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್ ಅಂಶ ಅತ್ಯಧಿಕವಾಗಿಯೇ ಸಿಗಲಿದೆ. ಇನ್ನು ಅಡುಗೆ ಮನೆಯಲ್ಲಂತು

error: Content is protected !!