ರಾಜ್ಯದ ಜನತೆಯ ಚಡ್ಡಿ ಬಿಚ್ಚಬೇಡಿ: ಕುಮಾರಸ್ವಾಮಿ ವ್ಯಂಗ್ಯ

suddionenews
1 Min Read

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಚಡ್ಡಿ ಸಂಘರ್ಷ ನಡೆಯುತ್ತಿದೆ. RSS ಚಡ್ಡಿಯನ್ನು ರಾಜ್ಯಾದ್ಯಂತ ಸುಡುತ್ತೇವೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಚಡ್ಡಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 

ಚಡ್ಡಿ ಬಿಚ್ಚಿದರೆ ಏನು ಸಿಗುತ್ತೆ. ಅವರು ಚಡ್ಡಿ ಸುಟ್ಟರು. ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳ್ತಾರೆ, ಕಾಂಗ್ರೆಸ್ ಚಡ್ಡಿ ಉದುರಿದೆ ಅಂತಾರೆ. ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ. ರಾಜ್ಯದ ಜನರ ಚಡ್ಡಿ ಉಡುರಿಸಬೇಡಿ. ರಾಜ್ಯದ ಜನತೆ ಗೌರವಾಗಿ ಬದುಕಬೇಕು ಅಂತ ವಾತಾವರಣ ನಿರ್ಮಾಣ ಮಾಡಿ. ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

NSUI ಸಂಘಟನೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆ ಮೇಲೆ ದಾಳಿ ನಡೆಸಿದಾಗ, ಆರ್ ಎಸ್ ಎಸ್ ಚಡ್ಡಿಯನ್ನು ಸುಟ್ಟಿದ್ದರು. ಈ ಬಗ್ಗೆ ಕೆಪಿಸಿಸಿಯಲ್ಲಿ ಸುದ್ದಿಗೋಷ್ಟಿ‌ನಡೆಸಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, NSUI ಸಂಘಟನೆ ಸಚಿವರ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಸುಟ್ಟಿದ್ದು ಒಂದು ಚಡ್ಡಿಯನ್ನು ಮಾತ್ರ. ಇದು ಕಾನೂನು ವಿರೋಧಿ ಕೃತ್ಯ ಹೀಗಾಗುತ್ತದೆ..? ಪ್ರತುಭಟನೆ ಮಾಡಿದವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *