ಶಕ್ತಿ ಯೋಜನೆಯ ಮೊದಲ ಬಸ್ ಹೊರಟಿದ್ದು ಎಲ್ಲಿಗೆ ಗೊತ್ತಾ..?

1 Min Read

ಬೆಂಗಳೂರು, ಜೂ.11 : ಇಂದಿನಿಂದ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಚಾಲನೆ ಕೂಡ ಚಾಲನೆ ನೀಡಿದ್ದಾರೆ. ಚಾಲನೆ ಸಿಕ್ಕ ಮೊದಲ ದಿನ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಬಸ್ ಕಳುಹಿಸಲಾಗಿದೆ. ಧರ್ಮಸ್ಥಳಕ್ಕೆ ಫ್ರೀ ಬಸ್ ಮಹಿಳೆಯರನ್ನು ಕರೆದೊಯ್ದಿದೆ.

ಫ್ರೀ ಬಸ್ ಯೋಜನೆಗೆ ಇಂದು ವಿಧಾನಸೌಧದಲ್ಲಿ ಚಾಲನೆ ನೀಡಲಾಗಿದೆ. ಆದರೆ ಧರ್ಮಸ್ಥಳಕ್ಕೆ ತೆರಳುವ ಬಸ್ ಗೆ ಸಿಎಂ ಸಿದ್ದರಾಮಯ್ಯ ಅವರು ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದ್ದಾರೆ. ಎರಡನೇ ಬಸ್ ಮೈಸೂರಿಗೆ ಬಿಡಲಾಗಿದ್ದು, ಮೂರನೇ ಬಸ್ ಅನ್ನು ಕಲಬುರಗಿಗೆ ಬಿಡಲಾಗಿದೆ. ಇನ್ನು ನಾಲ್ಕನೆ ಬಸ್ ಅನ್ನು ಬೆಳಗಾವಿಗೆ ಬಿಡಲಾಗಿದೆ.

ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಮಾಡಲಾಗಿದೆ. ಎಲ್ಲರಿಗೂ ಒಳ್ಳೆಯದ್ದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದ್ದಾರೆ. 41.80 ಲಕ್ಷ ಮಹಿಳೆಯರು ಈ ಉಚಿತ ಸೇವೆಯ ಲಾಭ ಪಡೆಯಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *