Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಿಜ್ಹಾ-ಬರ್ಗರ್ ಜೊತೆಗೆ ಕೂಲ್ ಡ್ರಿಂಕ್ಸ್ ಕುಡಿದರೆ ಎಷ್ಟು ಡೇಂಜರ್ ಗೊತ್ತಾ..?

---Advertisement---

ಸುದ್ದಿಒನ್ | ಪಿಜ್ಹಾ-ಬರ್ಗರ್ ನಂಥ ಜಂಕ್ ಫುಡ್ ಗಳಿಗೆ ಜನ ಅಡಿಕ್ಟ್ ಆಗಿ ಎಷ್ಟೋ ವರ್ಷಗಳು ಆಗೋಯ್ತು. ವೀಕೆಂಡ್ ನಲ್ಲಿ ಮಕ್ಕಳು ಕೂಡ ಏನು ಬೇಕು ಅಂದ್ರೆ ಪಿಜ್ಹಾ-ಬರ್ಗರ್ ಬೇಕು ಎಂಬ ಕಾಲ ಇದು. ಬರೀ ಪಿಜ್ಹಾ-ಬರ್ಗರ್ ತಿಂದ್ರೆ ಟೇಸ್ಟ್ ಅಷ್ಟೊಂದು ನಾಲಿಗೆಗೆ ಹತ್ತಲ್ಲ. ಆದ್ರೆ ಪಕ್ಕದಲ್ಲೊಂದು ಕೂಲ್ ಡ್ರಿಂಕ್ಸ್ ಇದ್ದರಂತೂ ಎರಡು ಪೀಸ್ ಜಾಸ್ತಿನೆ ಹೊಟ್ಟೆಯೊಳಗೆ ಹೋಗುತ್ತೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಡೇಂಜರ್ ಅನ್ನೋದು ಗೊತ್ತಾ..?

ಪಿಜ್ಹಾದಂತಹ ಪದಾರ್ಥ ಮೈದಾದಿಂದ ಕೂಡಿದ್ದು ಗಟ್ಟಿಯಾಗಿರುತ್ತದೆ. ಕೂಲ್ ಡ್ರಿಂಕ್ಸ್ ತೆಗೆದುಕೊಂಡರೆ ಖಂಡಿತಾ ಬೇಗ ಜೀರ್ಣವಾಗುತ್ತದೆ ಎಂಬ ನಂಬಿಕೆ. ಆದರೆ ಅದೆಷ್ಟು ಸತ್ಯ ಎಂಬುದು ಮಾತ್ರ ಗೊತ್ತಿಲ್ಲ. ಅತಿಯಾಗಿ ಕೂಲ್ ಡ್ರಿಂಕ್ಸ್ ಕುಡಿದರೆ ಅದು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ‌. ಹೆಚ್ಚು ಸೋಡಾ ಹಾಗೂ ಸಕ್ಕರೆ ಅಂಶವಿರುವ ಪಾನೀಯಾಗಳು ಮೂಳೆಯ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.

ಇಂತಹ ಪಾನೀಯಗಳು ಬಹಳಷ್ಟು ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಸಕ್ಕರೆ ದೇಹವನ್ನು ಭಾರವಾಗಿಸುತ್ತದೆ. ಇಲ್ಲಿಂದ ಕೊಬ್ಬಿನ ಯಕೃತ್ತಿನ ಅಪಾಯವು ಹೆಚ್ಚಾಗುತ್ತದೆ. ಈ ಪಾನೀಯಗಳನ್ನು ಹೆಚ್ಚುವರಿ ಸಕ್ಕರೆ ಮತ್ತು ವಿವಿಧ ಸಂರಕ್ಷಕಗಳೊಂದಿಗೆ ತಯಾರಿಸಲಾಗುತ್ತದೆ. ಕ್ಯಾಲೋರಿ ಅಂಶವೂ ಹೆಚ್ಚು.

ದಿನ ಬಿಟ್ಟು ದಿನ ತಂಪು ಪಾನೀಯ ಕುಡಿದರೆ ತೂಕ ಹೆಚ್ಚುತ್ತದೆ. ಪೌಷ್ಟಿಕತಜ್ಞರು ಕೂಡ ಇಂತಹ ಪಾನೀಯಗಳು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತಾರೆ. ಇದು ಹೆಚ್ಚಿನ ರಕ್ತದೊತ್ತಡ, ಟೈಪ್-2 ಮಧುಮೇಹ ಮತ್ತು ಸ್ಥೂಲಕಾಯದ ಹೆಚ್ಚಿನ ಅಪಾಯದಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಹಲವು ಸಮಸ್ಯೆಗಳಿಂದ ಅದರಲ್ಲೂ ಮೂಳೆ ಸಮಸ್ಯೆಯನ್ನು ಎದುರಿಸುತ್ತಾರೆ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment