ಬೆಂಗಳೂರು: ಡಿಕೆ ಶಿವಕುಮಾರ್ ಸದ್ಯಕ್ಕೆ ಹಲವು ಹುದ್ದೆಗಳನ್ನ ನಿರ್ವಹಿಸ್ತಾ ಇದ್ದಾರೆ. ಡಿಸಿಎಂ ಜೊತೆಗೆ ಬೆಂಗಳೂರು ಅಭಿವೃದ್ಧಿ ಖಾತೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಬ್ದಾರಿಯು ಅವರ ಮೇಲಿದೆ. ಇದೀಗ ಅವರ ತಮ್ಮ ಡಿಕೆ ಸುರೇಶ್ ಅವರು ಅಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ಇಷ್ಟವಿಲ್ಲ ಎಂಬುದನ್ನ ಹೇಳಿದ್ದಾರೆ.
ಅವರಿಗೆ ಅಧ್ಯಕ್ಷ ಸ್ಥಾನದಲ್ಲಿ ಉಳಿಯಬೇಕೆಂಬ ಆಸೆಯಿಲ್ಲ. ಹೈಕಮಾಂಡ್ ಏನು ಹೇಳುತ್ತೋ ಆ ರೀತಿ ನಡೆದುಕೊಳ್ಳುತ್ತಾರೆ. ಸಂಪುಟ ಪುನರ್ ರಚನೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾಯಕತ್ವದ ವಿಚಾರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ಮಾಡುತ್ತೆ ನೋಡೋಣಾ. ಅಂಪುಟ ಪುನರ್ ರಚನೆ ಸಿಎಂ ಸರ್ವಾಧಿಕಾರ. ಶಿವಕುಮಾರ್ ಅವರ ಸಲಹೆಯನ್ನ ಕೇಳಿದ್ರೆ ಕೊಡ್ತಾರೆ. ಸಿಎಂ ಇದ್ದಾರೆ ಅದನ್ನೆಲಲ ನೋಡಿಕೊಳ್ಳುವುದಕ್ಕೆ. ಹೈಕಮಾಂಡ್ ಹೇಳಿದ್ದನ್ನ ಶಿವಕುಮಾರ್ ಕೇಳುತ್ತಾರೆ ಎಂದಿದ್ದಾರೆ.
ಇದೆ ವೇಳೆ ನಾಯಕರ ದೆಹಲಿ ಪ್ರವಾಸದ ಬಗ್ಗೆ ಮಾತನಾಡುತ್ತಾ, ನನಗೆ ಬೇರೆ ಕೆಲಸವಿದೆ. ನಾಳೆ ನಾನು ಕೂಡ ದೆಹಲಿಗೆ ಹೋಗಬಹುದು. ನನ್ನ ಪಾಡಿದೆ ನಾನು ದೆಹಲಿಗೆ ಹೋಗ್ತೇನೆ. ಸಿಎಂ, ಡಿಸಿಎಂ ಕಾರ್ಯಕ್ರಮಕ್ಕೆ ಹೋಗಿದ್ದರು. ವಾಪಾಸ್ ಬರುತ್ತಿದ್ದಾರೆ. ಎಲ್ಲವನ್ನು ಕಾದು ನೋಡೋಣಾ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಈ ಮಾತು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಸಾಕಷ್ಟು ಕಾಂಪಿಟೇಷನ್ ಇದೆ. ಹೀಗಿರುವಾಗ ಡಿಕೆ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದ ಆಸೆ ಇಟ್ಟುಕೊಂಡಿಲ್ಲ ಎಂದಾಗ ಹೈಕಮಾಂಡ್ ಆಸಕ್ತಿ ಇರೋರಿಗೆ ಅವಕಾಶ ಕೊಡುತ್ತಾ ನೋಡಬೇಕಿದೆ.











