ಖರ್ಗೆ ಸಿಎಂ ಆಗೋದನ್ನ ದೇವೇಗೌಡ್ರೆ ತಪ್ಪಿಸಿದ್ರು : ಕೆ.ಎನ್.ರಾಜಣ್ಣ ಆಕ್ರೋಶ

suddionenews
1 Min Read

ತುಮಕೂರು: ಕಾಂಗ್ರೆಸ್ ನಲ್ಲಿ ದಲಿತ ಸಮಾವೇಶ, ದಲಿತ ಸಿಎಂ ಚರ್ಚೆಗಳು ಜೋರಾಗಿವೆ. ಈ ಬಗ್ಗೆ ಇಂದು ಕೆ.ಎನ್.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ದಲಿತ ಸಿಎಂ ಪರವಾಗಿ ಅಲ್ಲ, ನಮಗೆ ಏನು ಸಂವಿಧಾನಾತ್ಮಕವಾಗಿ ಹಕ್ಕುಗಳು ದೊರೆಯಬೇಕಿದೆ, ಆ ಹಕ್ಕುಗಳನ್ನು ದೊರಕಿಸಿಕೊಳ್ಳಲು ನಾವೂ ಆ ಸಮಾವೇಶ ಮಾಡ್ತಾ ಇದ್ದೀವಿ. ಇನ್ನು ಮೂರು ತಿಂಗಳು ಇದೆ ಆ ಸಮಾವೇಶಕ್ಕೆ. ಅಷ್ಟೊತ್ತಿಗೆ ಯಾರ್ಯಾರ ಏನೇನು ಹೇಳ್ತಾರೆ ನೋಡಿಕೊಂಡು ನಿರ್ಧಾರ ಮಾಡೋಣಾ.

ದಲಿತ ಸಿಎಂ ಚರ್ಚೆ ಈಗಿನದ್ದಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲವು ದಲಿತ ಸಿಎಂ ಚರ್ಚೆ ಮುನ್ನೆಲೆಗೆ ಬರುತ್ತದೆ. ಇದೀಗ ಮತ್ತೊಮ್ಮೆ ಆ ಚರ್ಚೆ ಉದ್ಭವವಾಗಿದ್ದು, ಆ ಬಗ್ಗೆ ಮಾತನಾಡಿದ್ದ ಕೆ.ಎನ್. ರಾಜಣ್ಣ, ಖರ್ಗೆಯವರು ಮುಖ್ಯಮಂತ್ರಿ ಆಗ್ಬೇಕು ಅನ್ನೋ ಮಾತಿತ್ತು. ಆಗ ಎಸ್.ಎಂ ಕೃಷ್ಣ ಅವರು ಆರು ತಿಂಗಳು ಮುಂಚೆ ಬಂದು ಅಧ್ಯಕ್ಷರಾಗಿದ್ರು. 99 ನಲ್ಲಿ ಅವರು ಅಧ್ಯಕ್ಷ ಆದ್ರೂ ಇವರಿಗೆ ತಡವಾಯಿತು. ಅದಾದ ಮೇಲೆ 2004ರಲ್ಲಿ ಮತ್ತೆ ಸಿಎಂ ಆಗುವ ಅವಕಾಶವಿತ್ತು. ಆಗ ಸನ್ಮಾನ್ಯ ದೇವೇಗೌಡ್ರು ಖರ್ಗೆ ಅವರನ್ನು ಬಿಟ್ಟು ಧರಮ್ ಸಿಂಗ್ ಅವರಿಗೆ ಪ್ರಿಫರ್ ಮಾಡಿದ್ರು.ಸಿದ್ದರಾಮಯ್ಯ ಅವರನ್ನು ತಪ್ಪಿಸಿದರು. ಸಿದ್ದರಾಮಯ್ಯ ಅವರ ಹೆಸರನ್ನ ಹೇಳಿದ್ರೆ ಕಾಂಗ್ರೆಸ್ ನವರು ಒಪ್ಪುತ್ತಾ ಇದ್ದರು ಆಗ. ಬೇಡ ಬೇಡ ಮುಖ್ಯಮಂತ್ರಿ ನೀವೆ ಮಾಡ್ಕೊಳಿ ಅಂದ್ರು. ಆಗ ಧರಮ್ ಸಿಂಗ್ ಹೆಸರನ್ನ ಸೂಚಿಸಿದ್ರು.

ಯಾಕಂದ್ರೆ ದೇವೇಗೌಡ್ರಿಗೆ ಆಗ ಮುಂದಾಲೋಚನೆ ಇತ್ತು. ಅವರೇ ಧರಮ್ ಸಿಂಗ್ ನ ತೆಗೆದು ಬಿಟ್ರೆ. ಆದ್ರೆ ಆಗ ಖರ್ಗೆ ಅವರಿದ್ದಿದ್ದರೆ ತೆಗೆಯೋದಕ್ಕೆ ಆಗ್ತಾ ಇತ್ತು. ಒಂದು ವೇಳೆ ಖರ್ಗೆ ಅವರು ಇದ್ದು ತೆಗೆದಿದ್ದರೆ ಎಲ್ಲಾ ಊರಲ್ಲೂ ಇವರ ಫೋಟೋ ಹಾಕಿ, ಹಾರ ಹಾಕಿ ಸುಟ್ಟಾಕಿ ಬಿಡೋರು. ಧರಮ್ ಸಿಂಗ್ ಪಾಪದ್ದು ಯಾರೂ ಕೇಳ್ತಾರೆ ಎಂದು ದಲಿತ ಸಿಎಂ ಹಿಸ್ಟರಿ ಬಗ್ಗೆ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks