Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿರಾಟ್ ಕೊಹ್ಲಿಯನ್ನ ಹಾಡಿ ಹೊಗಳಿದ ಡಿಸಿಎಂ ಡಿಕೆ ಶಿವಕುಮಾರ್

---Advertisement---

 

ರಾಮನಗರ; ಆರ್ಸಿಬಿ ಈ ಬಾರಿ ಕಪ್ ಗೆದ್ದಿದ್ದು ಎಷ್ಟು ಸಂತಸವಾಗಿದೆ ಅಂದ್ರೆ ಅದನ್ನೆಲ್ಲ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವೇ ಇಲ್ಲ. ರಾಜಕಾರಣಿಗಳಲ್ಲೂ ಕ್ರಿಕೆಟ್ ಅಂದ್ರೆ ಕ್ರೇಜ್ ಇರೋರು ಇದಾರೆ. ಅದರಲ್ಲೂ ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರೇ ಕ್ರಿಕೆಟ್ ಅಭಿಮಾನಿಗಳಾಗಿದ್ದಾರೆ. ನಿನ್ನೆ ನಡೆದ ನೆಕ್ ಟು ನೆಕ್ ಮ್ಯಾಚ್ ಅನ್ನು ಇಬ್ಬರು ಸಮಯ ಸಿಕ್ಕಲ್ಲಿ ವೀಕ್ಷಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿಯೇ ಮ್ಯಾಚ್ ನೋಡಿದ್ರೆ, ಡಿಸಿಎಂ ಡಿಕೆ ಶಿವಕುಮಾರ್ ಅವರು ಮನೆಯಲ್ಲಿ ಮ್ಯಾಚ್ ಎಂಜಾಯ್ ಮಾಡಿದ್ದಾರೆ. ಇದೀಗಮ್ಯಾಚ್ ಗೆದ್ದ ಖುಷಿಯಲ್ಲಿ, ಕಪ್ ಬಂದ ಸಂತಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಕೊಹ್ಲಿಯನ್ನ ಹಾಡಿ ಹೊಗಳಿದ್ದಾರೆ. ಇಡೀ ತಂಡವನ್ನು ಪ್ರೋತ್ಸಾಹಿಸಿದ್ದಾರೆ.

ಎಲ್ಲರಿಗೂ ಒಂದು ಅವಕಾಶವಿದೆ. ಡಿವಿಜಿ ಹೇಳ್ತಾರೆ ನಾನೇನು ಹುಲ್ಲುಕಡ್ಡಿ ಎಂದು ತಿಳಿಯಬೇಡ. ಈ ದೇಗುಲದ ಜಗತ್ತೊಳಗೆ ಒಂದಲ್ಲ ಒಂದು ಸಂದರ್ಭದಲ್ಲಿ ನಿನಗೆ ಅವಕಾಶವಿದೆ. ಚಿಕ್ಕವನಾಗಲಿ, ದೊಡ್ಡವನಾಗಲಿ ಅಂತ. ಸೋ 18 ವರ್ಷದಿಂದ ನಮ್ಮ ಆರ್ಸಿಬಿಯವರು ಬಹಳ ಪ್ರಯತ್ನ ಮಾಡ್ತಾ ಇದ್ರು‌. ವಿರಾಟ್ ಕೊಹ್ಲಿ ಅವರು ಎಷ್ಟೇ ಕಷ್ಟ ಆದರೂ ನಮ್ಮ ಟೀಂ ಬಿಡದೆ, ಬೆಂಗಳೂರು ಟೀಂ ಬಿಡದೆ ಕಷ್ಟ – ಸುಖ ಎರಡರಲ್ಲೂ ಅವರು ಉಳಿದುಕೊಂಡಿದ್ದರು. ಅದು ಬಹಳ ವಿಶೇಷವಾದಂತ ವಿಚಾರ.

ಭಾವುಕ ಯಾಕೆ ಆಗ್ತೀವಿ ಅಂದ್ರೆ ದುಃಖಕ್ಕೂ ಬರುತ್ತೆ, ಸಂತೋಷಕ್ಕೂ ಬರುತ್ತೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಫಲಕ್ಕಾಗಿ ಬಹಳ ಶ್ರಮ ಪಟ್ಟಿದ್ದಾರೆ. ಇಡೀ ಟೀಂನಲ್ಲಿ ಒಗ್ಗಟ್ಟಿದೆ. ಈ ಬಾರಿ ಕಪ್ ಗೆದ್ದಿರೋದು ಎಲ್ಲರಿಗೂ ಖುಷಿ ತಂದಿದೆ ಎಂದು ಆರ್ಸಿಬಿ ತಂಡಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...