ಬೆಂಗಳೂರು: ದಾವಣಗೆರೆ ಬೈ ಎಲೆಕ್ಷನ್ ಆದ್ಮೇಲೆ ಒಬ್ಬೊಬ್ಬರದ್ದೆ ತಲೆದಂಡವಾಗ್ತಾ ಇದೆ. ಅತ್ತ ನಜೀರ್ ಅವರನ್ನ ಸಿಎಂ ಅವರೇ ವಜಾಗೊಳಿಸಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಬೆಳಗ್ಗೆ ಗೊತ್ತಾಗಿದ್ದು. ನ್ಯೂಸ್ ನಲ್ಲಿ ನೋಡಿದೆ. ನಮಗೂ ಕೆಲವೊಂದು ವರದಿಗಳು ಬಂದಿತ್ತು. ಮಾಹಿತಿ ಇತ್ತು. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ ಎಂಬ ಮಾತನ್ನ ಹೇಳಿದ್ದಾರೆ.
ಕೆಲವೊಬ್ಬರಿಗೆ ಆ ಜವಾಬ್ದಾರಿ ಕೊಟ್ಟಿರ್ತೀವಿ ನಾವೂ. ಏನಾಗಿದೆ ಎಂಬ ವರದಿ ಇನ್ನು ಬರ್ಬೇಕಿದೆ. ಅದಕ್ಕೆ ನಾವೂ ಕಾಯ್ತಾ ಇದ್ದೀವಿ ಎಂದಿದ್ದಾರೆ. ಜಮೀರ್ ವಿಚಾರಕ್ಕೆ ನನಗೇನು ಮಾಹಿತಿ ಇಲ್ಲ ಎಂದಿದ್ದಾರೆ. ಇವತ್ತು ರಾತ್ರಿ ಮೇ ಬಿ ನಾನು ಚೆನ್ನೈಗೆ ಹೋಗ್ತಾ ಇದ್ದೀನಿ. ಬಿಕಾಸ್ ನಾಳೆ ಪ್ರೋಗ್ರಾಂ ಇದೆ ಚೆನ್ನೈನಲ್ಲಿ. ಸ್ವಲ್ಪ ಕ್ಯಾಂಪೇನ್ ಇದೆ ಐದಾರು ಕ್ಷೇತ್ರದಲ್ಲಿ. ಅಲ್ಲೆಲ್ಲ ವರ್ಕೌಟ್ ಮಾಡೋದಕ್ಕೆ ಹೇಳಿದ್ದೀನಿ ಎಂದಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಸಕರು ಒಬ್ಬೊಬ್ಬರನ್ನೇ ಕರೆದು ಮಾತನ್ನಾಡ್ತಾ ಇದ್ದಾರೆ ಅನ್ನೋ ಮಾತಿಗೆ, ರಾಜಕಾರಣ ಅಂದ್ರೆ ನಮ್ಮ ಎಂಎಲ್ಎಗಳಿಗೆ ಮುಂದಿನ ಭವಿಷ್ಯಕ್ಕೆ ಏನೇನು ರೂಪಿಸಬೇಕು, ಅದನ್ನೆಲ್ಲಾ ತೀರ್ಮಾನ ಮಾಡಬೇಕು ಅಲ್ವಾ. ಹೀಗಾಗಿ ಯಾರ್ಯಾರಿಗೆ ಏನೇನು ಹೇಳಬೇಕು, ತಿಳಿಸಬೇಕು ಎಂಬುದೆಲ್ಲವನ್ನು ಮಾರ್ಗದರ್ಶನ ಮಾಡಬೇಕು ಅಲ್ವಾ. ಎಲ್ಲರಿಗೂ ಕರೆದು ಎಲ್ಲಾ ಸಿದ್ಧತೆಗಳು ಆಗಬೇಕು. ಕಾರ್ಪೋರೇಷನ್ ಎಲೆಕ್ಷನ್, ಲೋಕಲ್ ಬಾಡಿ ಎಲೆಕ್ಷನ್, ಇವೆಲ್ಲ ಇರುತ್ತದೆ. ಪಾರ್ಟಿ ಪ್ರೆಸಿಡೆಂಟ್ ಆಗಿ ನಾನಲ್ಲದೆ ಇನ್ನ್ಯಾರು ಮಾತನಾಡ್ತಾರೆ. ನಮ್ಮ ಗ್ಯಾರಂಟಿಗಳೆಲ್ಲಾ ಹೇಗೆ ತಲುಪ್ತಾ ಇದೆ, ಏನೆಲ್ಲಾ ನಡೀತಾ ಇದೆ ಎಂಬ ಮಾಹಿತಿಯನ್ನ ಕೊಡ್ತಾ ಇದ್ದಾರೆ ಎಂದಿದ್ದಾರೆ.













