Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ಬಾಪೂಜಿ ಆಸ್ಪತ್ರೆ ಬಳಿ ಅನಾಮಧೇಯ ಶವ ಪತ್ತೆ

---Advertisement---

ದಾವಣಗೆರೆ. ಆಗಸ್ಟ್ 4: ನಗರದ ಬಾಪೂಜಿ ಆಸ್ಪತ್ರೆ ರಸ್ತೆ ಬದಿಯಲ್ಲಿ ಅನಾಮಧೇಯ ವ್ಯಕ್ತಿ ಮೃತನಾದ ಕುರಿತು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಮೃತರ ಚಹರೆ ವಿವರ: 5.5 ಅಡಿ ಎತ್ತರ, ಕೋಲುಮುಖ, 1 ಇಂಚು ಬಿಳಿಕಪ್ಪು ಮಿಶ್ರಿತ ತಲೆ ಕೂದಲು, ಸುಮಾರು 1/2 ಇಂಚು ಬಿಳಿ ಮತ್ತು ಕಪ್ಪು ಗಡ್ಡ ಮೀಸೆ ಹೊಂದಿದ್ದು, ಎಡಗೈಯಲ್ಲಿ ಎಪಿ ಬಲಗೈಯಲ್ಲಿ ಅಸ್ಪಷ್ಟವಾದ ಕಾಮಾಕ್ಷಿ ಅಂತ ಅಚ್ಚೆ ಇರುತ್ತದೆ. ಸಿಮೆಂಟ್ ಕಲರ್ ಕಪ್ಪು ನೀಲಿ ಬಿಳಿ ಪಟ್ಟಿಯುಳ್ಳ ಅರ್ಧತೊಳಿನ ಶರ್ಟ್, ನೀಲಿ ಬಣ್ಣದ ಕೆಂಪು ಮತ್ತು ಬಿಳಿ ಪಟ್ಟಿಯುಳ್ಳ ಕಲರ್ ಚಡ್ಡಿಯನ್ನು  ಧರಿಸಿರುತ್ತಾರೆ. ವಾರಸುದಾರರು ಇದ್ದಲ್ಲಿ ಬಡಾವಣೆ ಪೊಲೀಸ್ ಇನ್ಸ್ ಪೆಕ್ಟರ್ ದೂರವಾಣಿ ಸಂಖ್ಯೆ 9480803249, 08192-272012,259213, 253400 ತಿಳಿಸಬಹುದು.

 

ಮಹಿಳೆ ಕಾಣೆ
ದಾವಣಗೆರೆ. ಆಗಸ್ಟ್ 4: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಆಲೂರುಹಟ್ಟಿ ಗ್ರಾಮದ ಜ್ಯೋತಿಬಾಯಿ ಕೋಂ ಕೃಷ್ಣನಾಯ್ಕ ಎಂಬ 30 ವರ್ಷದ ವ್ಯಕ್ತಿ ಕಾಣೆಯಾಗಿರುವರು. ಚಹರೆ 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು  ಹೊಂದಿರುತ್ತಾರೆ. ಈ ವ್ಯಕ್ತಿಯ ಸುಳಿವು ದೊರೆತಲ್ಲಿ ಹರಿಹರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...