Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧನುನ ಡಾಕ್ಟರ್ ಮಾಡಬೇಕೆಂದುಕೊಂಡಿದ್ದ ಪೋಷಕರಿಗೆ ಡಾಕ್ಟರ್ ಸೊಸೆ ತಂದ ಡಾಲಿ..!

---Advertisement---

ಮೈಸೂರು; ಇಂದು ಮತ್ತು ನಾಳೆ ಡಾಲಿ ಧನಂಜಯ್ ಮದುವೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ. ನಿನ್ನೆಯೆಲ್ಲಾ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದು, ಇಂದು ಬಳೆ ಶಾಸ್ತ್ರ, ವಧು – ವರರ ಶಾಸ್ತ್ರಗಳು ನೆರವೇರಲಿವೆ. ಈಗಾಗಲೇ ಬರತಹತ್ ವೇದಿಕೆಯೂ ತಯಾರಾಗಿದೆ. ಡಾಲಿ ಮದುವೆ ಮೈಸೂರಿನ ವಸ್ತು ಪ್ರದರ್ಶನಾಲಯದ ಆವರಣದಲ್ಲಿ ನಡೆಯುತ್ತಿದೆ.

ನಾಳೆ ಮುಹೂರ್ತ ನೆರವೇರಲಿದ್ದು, ಇಂದು ಸಂಜೆ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯದ ಗಣ್ಯರು ಮತ್ತು ಅಭಿಮಾನಿಗಳನ್ನು ಡಾಲಿ ಆಹ್ವಾನ ಮಾಡಿದ್ದು, ಇಂದಿನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ. ಇಂದು ಮದುವೆಯ ಸಂಭ್ರಮ ರಂಗೇರಲಿದೆ.

ಇನ್ನು ಮಗ – ಸೊಸೆ ಬಗ್ಗೆ ಡಾಲಿ ಧನಂಜಯ್ ತಂದೆ ಸ್ವಾಮಿ ಅವರು ಮಾತನಾಡಿದ್ದು, ಮದುವೆಯ ಮೊದಲ ದಿನದ ಶಾಸ್ತ್ರ ಇಂದು ನಡೆಯುತ್ತಿದೆ. ಮೊದಲು ಗಂಗೆ ಪೂಜೆ, ಕಳಸ ಸ್ಥಾಪನೆ, ವಾಗ್ದಾನ ಶಾಸ್ತ್ರ ಎಂದು ನಾವೂ ತಾಂಬೂಲ ಬದಲಾಯಿಸಿಕೊಳ್ಳುತ್ತೇವೆ. ಬಳೆ ಶಾಸ್ತ್ರ, ವಧು ವರರ ಶಾಸ್ತ್ರ ಈ ಎಲ್ಲವೂ ಮುಗಿದ ಮೇಲೆ ಸಂಜೆ ರಿಸೆಪ್ಶನ್ ನಡೆಯಲಿದೆ. ನಾಳೆ ಮದುವೆ ನಡೆಯಲಿದೆ. ಧನಂಜಯನನ್ನ ಡಾಕ್ಟರ್ ಮಾಡಿಸಬೇಕು ಎಂದುಕೊಂಡಿದ್ದೆವು. ಎಷ್ಟೇ ಖರ್ಚಾದರೂ ಪರವಾಗಿಲ್ಲ ಡಾಕ್ಟರ್ ಆಗು ಎಂದೆವು. ಆದರೆ ಅವ್ನು ಇಂಜಿನಿಯರಿಂಗ್ ಕಲಿತ. ಆಮೇಲೆ ಸಿನಿಮಾ ಮಾಡ್ತೀನಿ ಅಂತ ಹೋದ. ಆದರೆ ಡಾಕ್ಟರ್ ಅನ್ನೇ ನಮ್ಮ ಸೊಸೆಯಾಗಿ ತರ್ತಾ ಇರೋದು ನಮಗೆ ತುಂಬಾ ಖುಷಿ ಇದೆ. ಈ ಊರಿನ ಶಾಲೆ ಜೀರ್ಣೋದ್ಧಾರ, ಅರಳಿ ಕಟ್ಟೆ ಅಭಿವೃದ್ಧಿಯನ್ನು ಮಾಡಿಸಿದ್ದಾನೆ. ಹೀಗೆ ನಮ್ಮ ಮಗ ನಮ್ಮೆಲ್ಲಾ ಆಸೆಯನ್ನು ಈಡೇರಿಸಿದ್ದಾನೆ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment