ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 17 : ಪತ್ರಕರ್ತ ಸುರೇಶ ಬೆಳಗೆರೆ ಅವರನ್ನು ಪ್ರಜಾತತ್ವ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರನ್ನಾಗಿಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಹೋಟೆಲ್ ಕಾನಿಷ್ಕ್ ಗ್ರ್ಯಾಂಡ್ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ವೆಬ್ ಸೈಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸ್ಥಾಕಪರಾದ ನಾರಾಯಣರೆಡ್ಡಿಯವರು ಪ್ರಜಾತತ್ವ ಮಾನವ ಹಕ್ಕುಗಳ (ಆಯೋಗ) ಪೌಂಡೇಶನ್ ನ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ರನ್ನಾಗಿ ಸುರೇಶ ಬೆಳಗೆರೆ ಇವರನ್ನ ಆಯ್ಕೆ ಮಾಡಿ ಗುರುತಿನ ಚೀಟಿ ನೀಡಿ ಸನ್ಮಾಸಿದ್ದಾರೆ.














