Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಣ್ಣನ ಮಕ್ಕಳಿಗೂ ಆಸ್ತಿ ಬರೆದಿದ್ದ ತಂದೆಯನ್ನ ಇರಿದು ಕೊಂದ ಪಾಪಿ ಮಕ್ಕಳು..!

---Advertisement---

ಬೆಂಗಳೂರು: ಹಣ.. ಆಸ್ತಿ ಅಂದ್ರೆ ಯಾವ ಸಂಬಂಧವೂ ಲೆಕ್ಕಕ್ಕೆ ಬರಲ್ಲ. ಅದಕ್ಕೊಂದು ಉದಾಹರಣೆ ಬೆಂಗಳೂರಲ್ಲಿ ನಡೆದಿದೆ. ಆಸ್ತಿಗಾಗಿ ಮಕ್ಕಳೇ ತಂದೆಯನ್ನ ಕೊಂದಿರುವ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಶುರುವಾದ ಜಗಳದಲ್ಲಿ ತಂದೆಯ ಕೊಲೆಯಾಗಿದೆ. ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಮೋಹನ್ ಕುಮಾರ್ ರನ್ನ ಈಗಾಗಲೇ ಬಂಧಿಸಿದ್ದು, ಇನ್ನೊಬ್ಬ ಮಗ ಗಜೇಂದ್ರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮುನಿಕೃಷ್ಣ ಕೊಲೆಯಾದ ದುರ್ದೈವಿ. ಇವರು ಬಿಎಂಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ನಿವೃತ್ತಿ ಜೀವನವನ್ನ ಕಳೆಯುತ್ತಿದ್ದರು. ದುಡಿದ ಹಣದಲ್ಲಿ ಧೂಪನಗರದಲ್ಲಿ 6 ಕೋಟಿ ಮೌಲ್ಯದ ಮೂರು ಕಟ್ಟಡಗಳನ್ನ ಹೊಂದಿದ್ದರು. ಈ ಆಸ್ತಿಯನ್ನ ಅದಾಗಲೇ ಹಂಚಿ ವಿಲ್ ಮಾಡಿದ್ದರು. ಎರಡು ಕಟ್ಟಡಗಳನ್ನ ಮೊಮ್ಮಕ್ಕಳ ಹೆಸರಲ್ಲಿ, ಇನ್ನೊಂದು ಕಟ್ಟಡವನ್ನು ತಮ್ಮನ ಮಕ್ಕಳ ಹೆಸರಿಗೆ ಬರೆದಿದ್ದರು. ಈ ವಿಚಾರವೇ ಮಕ್ಕಳ ಕೋಪಕ್ಕೆ ಕಾರಣವಾಗಿದೆ. ಇದರಿಂದಾನೇ ಜಗಳಗಳು ಶುರುವಾಗಿದೆ.

ಆಸ್ತಿಯನ್ನ ನೀನು ಮಾಡಿ, ತಮ್ಮನ ಮಕ್ಕಳ ಹೆಸರಿಗೆ ಯಾಕೆ ಬರೆದಿರೋದು ಎಂಬ ವಿಚಾರದ ಬಗ್ಗೆ ಚರ್ಚೆಯಾಗಿದೆ. ಮಾತಿಗೆ ಮಾತು ಬೆಳೆದಿದೆ. ಈ ಜಗಳದ ನಡುವೆ ಮಕ್ಕಳು ಕಬ್ಬಿಣದ ರಾಡ್ ನಿಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಮಕ್ಕಳಿಗೆ ಹೆದರಿಸೋದಕ್ಕೆ ಹೋದ ಮುನಿಕೃಷ್ಣ, ಒಳಗೆ ಹೋಗಿ ಚಾಕು ತಂದಿದ್ದಾರೆ. ಆದರೆ ದುರದೃಷ್ಟವಶಾತ್ ಅದೇ ಚಾಕು ತೆಗೆದುಕೊಂಡು ಮಕ್ಕಳು, ತಂದೆಯನ್ನೇ ಇರಿದಿದ್ದಾರೆ. ಇದರಿಂದ ಮುನಿಕೃಷ್ಣ ಸಾವನ್ನಪ್ಪಿದ್ದಾರೆ. ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...