Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಿರುಪತಿ ಬೆಟ್ಟ ಹತ್ತುವಾಗ ಚಿರತೆ ದಾಳಿಗೆ ಮಗು ಸಾವು : ಸಿಸಿಟಿವಿಯಲ್ಲಿ ಸೆರೆ..

Facebook
Twitter
Telegram
WhatsApp

 

ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ದೇವರು ಎಂದರೆ ಅದು ತಿರುಪತಿ‌ ತಿಮ್ಮಪ್ಪ. ದೇಶದ ನಾನಾ ಭಾಗಗಳಿಂದ ತಿರುಪತಿ ತಿಮ್ಮಪ್ಪನಿಗೆ ಭಕ್ತರಿದ್ದಾರೆ. ದೇವಸ್ಥಾನಕ್ಕೆ‌ ಕೆಲವರು ಬೆಟ್ಟದ ಮೇಲಕ್ಕೆ ಗಾಡಿಯಲ್ಲಿ ಹೋದರೆ, ಇನ್ನು ಕೆಲ ಭಕ್ತರು ಬೆಟ್ಟ ಹತ್ತಿಕೊಂಡು ಹೋಗುತ್ತಾರೆ. ಆದ್ರೆ ಹೀಗೆ ಬೆಟ್ಟ ಹತ್ತುವಾಗ ಚಿರತೆಯ‌ ಬಗ್ಗೆ ಕೊಂಚ ಗಮನವಿರಲಿ.

ಪಾದಚಾರಿ‌ ಮಾರ್ಗದಲ್ಲಿ ತೆರಳುವಾಗ ಚಿರತೆಯೊಂದು‌ ಬಾಲಕಿಯನ್ನು ಹೊತ್ತುಕೊಂಡು ಹೋಗಿದೆ. ತನ್ಮ ಮನೆಯವರ ಜೊತೆಗೆ ಲಕ್ಷಿತಾ ಎಂಬ ಆರು ವರ್ಷದ ಪುಟ್ಟ ಬಾಲಕಿ ಕೂಡ ಬೆಟ್ಟ ಹತ್ತುತ್ತಿದ್ದಳು. ಆದ್ರೆ ಈ ವೇಳೆ‌ಮಾರ್ಗ ಮಧ್ಯದಲ್ಲಿಯೇ ಬಾಲಕಿ ನಾಪತ್ತೆಯಾಗಿದ್ದಾಳೆ. ಗಾಬರಿಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಅಲ್ಲಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಸತ್ಯ ಗೊತ್ತಾಗಿದೆ. ಚಿರತೆಯೊಂದು ಮಗುವನ್ನು ಹೊತ್ತುಕೊಂಡ ಹೋದ ದೃಶ್ಯ ಸೆರೆಯಾಗಿದೆ. ಸದ್ಯ ಪೊಲೀಸರು ನಾಪತ್ತೆಯಾದ ಕಾಡಲ್ಲೆಲ್ಲಾ ಹುಡುಕಾಟ ನಡೆಸಿದಾಗ, ಮಗುವಿನ ಮೃತದೇಹ‌ ಸಿಕ್ಕಿದೆ. ಚಿರತೆಯ ದಾಳಿಗೆ ಲಕ್ಷಿತಾಳ ಪ್ರಾಣವೇ ಹೋಗಿದೆ. ತಿರುಪತಿಯಲ್ಲಿಯೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಾದಯಾತ್ರೆಯ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದರಿಂದ ಒಳ್ಳೆಯದ್ದಾಗುತ್ತದೆ, ಪುಣ್ಯ ಸಿಗುತ್ತದೆ ಎಂದು ನಂಬಿ, ತಿಮ್ಮಪ್ಪನ ಮೇಲೆ ಭಾರ ಹಾಕಿ ಹೊರಟ ಭಕ್ತರಿಗೆ, ಯಾವತ್ತಿಗೂ ಅರಗಿಸಿಕೊಳ್ಳಲಾಗದ ನೋವು ಸಿಕ್ಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ನಗರದ ಪಾಂಡುರಂಗ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಶ್ರೀ ಹರಿವಾಯುಗುರು ಸೇವಾ ಟ್ರಸ್ಟ್ ವತಿಯಿಂದ ಆಚರಿಸುವ ಹರಿದಾಸ ಹಬ್ಬ ಸಪ್ತಾಹದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ನ ಕಾರ್ಯದರ್ಶಿ

ಚಿತ್ರದುರ್ಗ | ಐಎಂಎ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಆಯ್ಕೆ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 27 : ಭಾರತೀಯ ವೈದ್ಯಕೀಯ ಸಂಘ (ಐಎಮ್‌ಎ) ಚಿತ್ರದುರ್ಗ ಶಾಖೆಯ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಡಾ. ಪಾಲಾಕ್ಷಯ್ಯ ಎಲ್. ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಗರದ ಐಎಂಎ

ಕುಮಾರಸ್ವಾಮಿಯವರು ಹಿಂದೆ ಚುನಾವಣೆಯಲ್ಲಿ ಸೋತಾಗ ಅಭಿಮನ್ಯು ಆಗಿರಲಿಲ್ಲವೇ ? – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 27: ಕುಮಾರಸ್ವಾಮಿಯವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ಹಾಗೂ ನಂತರ ರಾಮನಗರದಲ್ಲಿ ಸೋತಿದ್ದರು. ಆಗ ಅವರು ಅಭಿಮನ್ಯು ಆಗಿರಲಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮರುಪ್ರಶ್ನಿಸಿದರು. ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಅಭಿಮನ್ಯುವಲ್ಲ, ಅರ್ಜುನನಾಗಿ ಹೊರಹೊಮ್ಮಮಲಿದ್ದಾರೆ

error: Content is protected !!