ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಶಿವಮೊಗ್ಗ: ಇಡೀ ಜಿಲ್ಲೆಯೇ ಬೆಚ್ಚಿಬೀಳುವಂತ ಘಟನೆ ನಡೆದಿದೆ. ಮಕ್ಕಳ ಜಗಳಗಳು ಕೊಲೆಯಲ್ಲಿ ಅಂತ್ಯವಾಗೋದು ಅಂದ್ರೆ ಏನು..? ಮಕ್ಕಳ ಮನಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುತ್ತಾ ಇದೆ ಎಂಬ ಚಿಂತೆ ಪೋಷಕರನ್ನ ಕಾಡುವಂತೆ ಮಾಡಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೊರವಲಯದ ಸೂಳೆಬೈಲಿನಲ್ಲಿ ನಡೆದಿದೆ. ಸಂಕೇತ್ ಎಂಬ ವಿದ್ಯಾರ್ಥಿ ಕೊಲೆಯಾದ ದುರ್ದೈವಿ.
ಈ ಬಗ್ಗೆ ಶಿವಮೊಗ್ಗದ ಎಸ್ಪಿ ಮಾಹಿತಿ ನೀಡಿದ್ದಾರೆ. ಸ್ಪೆಷಲ್ ಕ್ಲಾಸ್ ಅನ್ನ ಮುಗಿಸಿಕೊಂಡು ಸಂಕೇತ್ ಮತ್ತು ಸಂಗಡಿಗರು ಬರ್ತಾ ಇದ್ದರು. ಈ ವೇಳೆ ಹುಡುಗರ ಮಧ್ಯೆಯೇ ಮಾತಿನ ಚಕಮಕಿ ಶುರುವಾಗಿದೆ. ಅದರಿಂದ ಕೈ ಕೈನಲ್ಲಿಯೇ ಮೊದಲು ಹೊಡೆದಾಡಿಕೊಂಡಿದ್ದಾರೆ. ಸಂಕೇತ್ ಇದರಿಂದ ಕುಸಿದು ಬಿದ್ದಿದ್ದಾನೆ. ಅಲ್ಲಿಯೇ ಇದ್ದಂತ ನಯಾಜ್ ಹಾಗೂ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬರ್ತಾರೆ. ಅಷ್ಟರಲ್ಲಿ ಆತನ ಪ್ರಾಣ ಹೋಗಿದೆ ಅಂತ ಅನೌನ್ಸ್ ಮಾಡ್ತಾರೆ. ಯಾರೂ ಈ ಕೃತ್ಯ ಮಾಡಿದ್ದಾರೆ ಅವರು ಅಪ್ರಾಪ್ತರು. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.
ಸಂಕೇತ್ ಮನೆ ದುಃಖದಿಂದ ಕೂಡಿದ್ದು ಸಂಕೇತ್ ತಾಯಿ ನೋವಿನಲ್ಲಿಯೇ ಮಾತನ್ನಾಡಿದ್ದಾರೆ. ಇವತ್ ಎಕ್ಸಾಂ ಇದೆ ಮಾ ಅಂತ ಎಲ್ಲರಿಗೂ ಹೇಳಿ ಹೋದ. ಟ್ಯೂಷನ್ ನವರಿಗೆ ಕರೆ ಮಾಡಿ ಕೇಳಿದ್ದಕ್ಕೆ 9 ಗಂಟೆಗೆ ಕಳುಹಿಸ್ತೀವಿ ಅಂದಿದ್ರು. ಆಸ್ಪತ್ರೆಗೆ ತಗೊಂಡ್ ಬಂದಿದ್ದರು. ನನ್ನ ತೊಡೆ ಮೇಲೆ ಹಾಕೊಂಡು ಸಂಕೇತ ಅಂದ್ರು ಮಾತಾಡ್ಲಿಲ್ಲ. ಒಳಗೆ ತಗೊಂಡ್ ಹೋದಾಗ ಡಾಕ್ಟರ್ ಹೇಳಿದ್ರು, ಇಲ್ಲಪ್ಪ ಜೀವ ಹೋಗಿದೆ ಅಂದ್ರು. ವಂಶ ಬೆಳೆಸೋ ಮಗನೇ ಇಲ್ಲ ಅಂತ ಕಣ್ಣೀರು ಹಾಕಿದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್