ಬಿಜೆಪಿಯವರಿಗೂ ಪಕ್ಷ ಕಟ್ಟಲೂ ನೂರು ವರ್ಷ ಬೇಕಾಯ್ತು : ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

suddionenews
1 Min Read

ಬೆಳಗಾವಿ: ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದು, ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಕ್ಕೂ ಕರ್ನಾಟಕಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ. ಭಿನ್ನಮತ ಇರಬಹುದು ಆದರೆ ಚುನಾವಣೆಗೆ ತೊಂದರೆ ಆಗಲ್ಲ. ಎಲ್ಲಾ ಪಕ್ಷಗಳಲ್ಲೂ ಇರುವುದೇ. ಅದರಲ್ಲಿ ಹೊಸದೇನು ಇಲ್ಲ.

ಬಿಜೆಪಿಯವರು ಪಕ್ಷ ಕಟ್ಟಲು ನೂರು ವರ್ಷ ತೆಗೆದುಕೊಂಡರು. ಅವರು ಕೂಡ ಒಂದೇ ಸಲ ಏನು ಬಂದಿಲ್ಲ. ಹಂತ ಹಂತವಾಗಿ ಬಂದಿದ್ದಾರೆ. ಈಗ ಹಂತ ಹಂತವಾಗಿ ಕೆಳಗೆ ಇಳಿದಿದ್ದೇವೆ. ಮತ್ತೆ ಮೇಲೆ ಹೋಗಿಯೇ ಹೋಗ್ತೇವೆ. 10 ರೂಪಾಯಿಯ ಶಾಲು ಇಡೀ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿದೆ. ಈ ರೀತಿ ಪದೇ ಪದೇ ಮಾಡ್ತಿರ್ತಾರೆ. ಇದು ತಾತ್ಕಾಲಿಕವಷ್ಟೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *