ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 08 : ಭಾರತ್ ಬಂಜಾರ ಜೋಡೋ ಏಕತಾ ಸಂಕಲ್ಪ ಯಾತ್ರೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಬರಮಾಡಿಕೊಂಡರು.
ಮಹಾರಾಷ್ಟ್ರದ ಬಂಜಾರ ಸಮಾಜದ ಗುರುಗಳಾದ ಬಾಬುಸಿಂಗ್ ಮಹಾರಾಜ್ರವರ ಸಾರಥ್ಯದಲ್ಲಿ ಅನಂತಪುರ ಜಿಲ್ಲೆಯ ಗುತ್ತಿ ಸೇವಾಗಡ್ನಿಂದ ಪ್ರಾರಂಭಗೊಂಡಿರುವ ಈ ಯಾತ್ರೆ ಸೂರಗೊಂಡನಕೊಪ್ಪಕ್ಕೆ ತೆರಳಿ ಅಲ್ಲಿಂದ ದೆಹಲಿ ತಲುಪಿ ಬೃಹತ್ ಮಟ್ಟದಲ್ಲಿ ಬಂಜಾರ ಜೋಡೋ ಏಕತಾ ಸಂಕಲ್ಪ ಯಾತ್ರೆಯನ್ನು ನಡೆಸಲಿದೆ.
ಒಂದು ಸಮಾಜ, ಒಂದು ಧ್ವನಿ, ಒಂದು ಸಂಕಲ್ಪ ಎಂಬ ಉದ್ದೇಶವನ್ನಿಟ್ಟುಕೊಂಡು ಸಂಚರಿಸುತ್ತಿರುವ ಬಂಜಾರ ಜೋಡೋ ಏಕತಾ ಸಂಕಲ್ಪ ಯಾತ್ರೆಯ ದೆಹಲಿ ಕಾರ್ಯಕ್ರಮದಲ್ಲಿ ರಾಜ್ಯದ 22 ಜಿಲ್ಲೆಗಳಿಂದ ಸ್ವಾಮೀಜಿಗಳು, ರಾಜಕಾರಣಿಗಳು, ಬಂಜಾರ ಸಮಾಜದ ಮುಖಂಡರುಗಳು ಭಾಗವಹಿಸಲಿದ್ದಾರೆಂದು ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್ನಾಯ್ಕ ತಿಳಿಸಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಆರ್.ಗಿರೀಶ್ನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾನಾಯ್ಕ ಸೇರಿದಂತೆ ಬಂಜಾರ ಸಮಾಜದ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಏಕತಾ ಸಂಕಲ್ಪ ಯಾತ್ರೆಯ ನೇತೃತ್ವ ವಹಿಸಿದರುವ ಬಾಬುಸಿಂಗ್ ಮಹಾರಾಜ್ರವರು ಒನಕೆ ಓಬವ್ವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಿದರು.











