ದಾವಣಗೆರೆ: ಅಮಿತ್ ಶಾ ಅವರು ಪ್ರಭಾ ಮಲ್ಲಿಕಾರ್ಜುನ ಅವರನ್ನ ಹೊಗಳಿಲ್ಲ, ಭಾರೀ ಚಾಲಾಕಿ ಎಂದು ಹೇಳಿದರು. ಹೊಸ ಸಂಸದರು ಬಂದು ವರ್ಷ ಕಳೆದಿದೆ ಎಂದು ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಜಿ.ಎಂ.ಸಿದ್ದೇಶ್ವರ ಅಭಿಮಾನಿಗಳು ನೆರವೇರಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ ಈ ಬಗ್ಗೆ ಮಾತನಾಡಿದ್ದಾರೆ.
ಈಗಿನ ಸಂಸದೆ ಪ್ರಭಾ ಅವರ ಮಾವ ಅಡ್ಜೆಸ್ಟ್ಮೆಂಟ್ ಮಾಡಿದ ಪರಿಣಾಮವಾಗಿ ಅವರು ಗೆದ್ದರು. ಗೃಹ ಸಚಿವ ಅಮಿತ್ ಶಾ ನಿಮ್ಮನ್ನು ಹೊಗಳಿಲ್ಲ. ಬಾರೀ ಚಾಲಕಿ ಇದ್ದಾರೆ ಅಂದ್ರು. ಹೊಸ ಸಂಸದರು ಬಂದು ವರ್ಷವಾಗಿದೆ. ಅಶೋಕ ರೈಲ್ವೆ ಗೇಟ್ ಬಳಿ ಕಾಮಗಾರಿ ಕೈಗೊಳ್ಳದ, ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಅಳವಡಿಸದ ಕಾರಣ ಐದು ಯೋಜನೆಗಳಿಗೆ ಹಿಂದಿನ ಸಂಸದ ಸಿದ್ದೇಶ್ವರರು ತಂದ ಅನುದಾನ ವಾಪಾಸ್ ಆಗಿದೆ. ಇನ್ನು ಮುಂದಾದರು ಪ್ರಭಾ ಹಿಂದಿನ ಒಳ್ಳೆಯ ಕೆಲಸಗಳನ್ನು ಮುಂದುವರೆಸುತ್ತೇನೆಂದು ಸೌವಜನ್ಯ ತೋರಲಿ ಎಂದು ಸಲಹೆ ನೀಡಿದ್ದಾರೆ.
ಮೈಸೂರಿನಲ್ಲಿ ದನ ಮೇಯುತ್ತಿದ್ದ ವಿಮಾನ ನಿಲ್ದಾಣದ ಜೀರ್ಣೋದ್ಧಾರಕ್ಕೆ ಜಿ.ಎಂ. ಸಿದ್ದೇಶ್ವರ ಅವರ ಸಹಕಾರವೂ ಇದೆ. ಜಿ.ಮಲ್ಲಿಕಾರ್ಜುನಪ್ಪನವರು ದಾವಣಗೆರೆಯಲ್ಲಿ ಪಕ್ಷ ಬೆಳೆಸಿದರು. ನಾಲ್ಕು ಬಾರಿ ದಾವಣಗೆರೆ ಕ್ಷೇತ್ರ ಪ್ರತಿನಿಧಿಸಿರುವ ಸಿದ್ದೇಶ್ವರ 115 ಕಾಮಗಾರಿ ಮಾಡಿಸಿದ್ದಾರೆ ಎಂದರು.
ಇದೆ ವೇಳೆ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ”ಬಿ.ಎಸ್. ಯಡಿಯೂರಪ್ಪನವರ ಬಲಗೈ ಭಂಟರಾಗಿ ಪಕ್ಷ ಕಟ್ಟಿದವರಲ್ಲಿ ಜಿ.ಎಂ. ಸಿದ್ದೇಶ್ವರ್ ಕೊಡುಗೆಯು ಇದೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಚ್ಚಿನ ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ ಕೀರ್ತಿ ಸಿದ್ದೇಶ್ವರ ಅವರಿಗೆ ಸಲ್ಲಲಿದೆ” ಎಂದರು.


