ದಾವಣಗೆರೆ: ಕಳೆದ ಕೆಲವು ತಿಂಗಳುಗಳಿಂದ ಅಡಿಕೆ ಬೆಲೆಯಲ್ಲಿ ಬಾರೀ ಏರಿಕೆಯಾಗುತ್ತಲೆ ಇದೆ. ಇದು ಅಡಿಕೆ ಬೆಳೆಗಾರರಿಗೆ ಸಂತಸವನ್ನ ತಂದಿದೆ. ಕಷ್ಟಪಟ್ಟು ಕಾಪಾಡಿಕೊಳ್ಳುವ ಬೆಳೆಗೆ ಒಳ್ಳೆ ಬೆಲೆ ಸಿಗ್ತಾ ಇರೋದಕ್ಕೆ ರೈತರಿಗೆ ಇನ್ನಿಲ್ಲದ ಸಂತಸ ಕಾಣಿಸುತ್ತಿದೆ. ಹಾಗಾದ್ರೆ ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ ಎಂಬುದನ್ನ ನೋಡೋಣಾ.
ದಾವಣಗೆರೆ ಭಾಗದಲ್ಲಿ ಹೆಚ್ಚಿನ ಬೆಳೆಗಾರರು ಅಡಿಕೆಯನ್ನೇ ಬೆಳೆಯುವುದು. ಇಂದಿನ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 57,500 ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ರೈತರಿಗೆ ಡಬ್ಬಲ್ ಖುಷಿ ಸಿಕ್ಕಿದೆ. ದಾವಣಗೆರೆಯಲ್ಲಿಯೇ ರಾಶಿ ಅಡಿಕೆ 24,000ಕ್ಕೆ ಹೋಗಿದೆ. ಶಿವಮೊಗ್ಗ ಮಾರುಕಟ್ಟೆ ಬೆಟ್ಟೆ ಅಡಿಕೆ ಕ್ವಿಂಟಾಲ್ ಗೆ 53,519 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ 46,161, ಸರಕು 52,069 ರೂಪಾಯಿಗೆ ಸೇಲ್ ಆಗಿದೆ.
ಯಲ್ಲಾಪುರದಲ್ಲಿ ಕ್ವಿಂಟಾಲ್ ಬೆಳೆಗೋಟು 18,559, ತಟ್ಟಿಬೆಟ್ಟೆ 28,769, ಕೋಕಾ ಅಡಿಕೆ 10,900 ರೂಪಾಯಿ. ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ಬಿಳೆಗೋಟು 16,910, ರಾಶಿ ಅಡಿಕೆ ಕ್ವಿಂಟಾಲ್ ಗೆ 41,599 ರೂಪಾಯಿಗೆ ಮಾರಾಟವಾಗಿದೆ. ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಕೊಳೆ ರೋಗ, ನೀರಿಲ್ಲದ ಸಮಸ್ಯೆ ಈ ಎಲ್ಲಾ ಸಮಸ್ಯೆಗಳಿಂದ ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವೇ ಸರಿ. ಹೀಗಿರುವಾಗ ಮಾರುಕಟ್ಟೆಯಲ್ಲಿ ಅಡಿಕೆಗೆ ಸರಿಯಾದ ಬೆಲೆಯೇ ಸಿಗದೆ ಹೋದರೆ ರೈತರ ಪಾಡು ಏನಾಗಬೇಡ ಹೇಳಿ. ಮಾಡಿದ ಸಾಲ ಸೋಲವಾದರೂ ತೀರಿಸಬೇಕು. ಇಂದಿನ ಬೆಲೆಗೆ ಮತ್ತೆ ಸಾಲಾ ಮಾಡಿ, ಬೆಳೆ ಮಾರಿದರು ಸಾಲ ತೀರಿಸಲಾಗದೆ ಹೋದರೆ ರೈತ ಕೃಷಿ ಮೇಲೆಯೇ ಬೇಸರ ಮಾಡಿಕೊಳ್ಳುತ್ತಾನೆ. ಸದ್ಯ ರೈತರ ಖುಷಿಗೆ ಕಾರಣವಾಗಿದೆ ಅಡಿಕೆ ಬೆಲೆಯ ಏರಿಕೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










