Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿಜೆಪಿಗೊಂದು ಡಿಕೆ ಶಿವಕುಮಾರ್ ಕಡೆಯಿಂದ ಸವಾಲ್

ಡಿಕೆ ಶಿವಕುಮಾರ್
---Advertisement---

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಕೇಸ್ ಸಂಬಂಧ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿಜೆಪಿಗೊಂದು ಸವಲಾಕಿದ್ದಾರೆ ಡಿಕೆ ಶಿವಕುಮಾರ್. ಇವತ್ತು ನಾವೂ ನೀವೆಲ್ಲಾ ಸೇರಿ ನಮ್ಮ ನೈತಿಕತೆಯಿಂದ ಇನ್ಮುಂದೆ ನಾವೆಲ್ಲಾ ಹೋರಾಟವನ್ನು ಮುಂದುವರೆಸಬೇಕು. ಇಲ್ಲಿ ಮಾಧ್ಯಮ ಸ್ನೇಹಿತರಿದ್ದಾರೆ. ಬಿಜೆಪಿ ಅವರಿಗೊಂದು ಸವಾಲಾಕ್ತಾ ಇದ್ದೀನಿ ನಾನು ಎಂದು ಗುಡುಗಿದ್ದಾರೆ.

ಯಾರಿಗೇಳಿ ಬಿಜೆಪಿ ಅವರಿಗೆ, ಅವರ ಪಕ್ಷದ ಅಧ್ಯಕ್ಷರಿಗೆ, ಅವರ ಶಾಸಕರುಗಳಿಗೆ. ಇನ್ಮುಂದೆ ಹೋರಾಟಕ್ಕೆ ಮಾಡಬೇಕಾದರೆ ಗಾಂಧಿ ಪ್ರತಿಮೆ ಮುಂದೆ ಕೂತು ಹೋರಾಟ ಮಾಡುವ ಹಕ್ಕನ್ನು ನೀವೂ ಕಳೆದುಕೊಂಡಿದ್ದೀರಿ. ಇದನ್ನ ತಾವೂ ಗಮನದಲ್ಲಿಟ್ಟುಕೊಳ್ಳಬೇಕು. ಮುಂದಕ್ಕೆ ಯಾವುದೇ ಕಾರಣಕ್ಕೂ ಗಾಂಧಿ ಪ್ರತಿಮೆ ಕೂತು ಹೋರಾಟ ಮಾಡಬಾರದು. ಬಡವರಿಗೆ ಕೂಲಿ ಕೊಡುವಂತಹ ಹೆಸರು, ಉದ್ಯೋಗ ಕೊಡುವಂತಹದ್ದಕ್ಕೆ ಗಾಂಧಿಜಿ ಹೆಸರನ್ನ ಇಟ್ಟಿದ್ದೀವಿ. ಆದರೆ ಅದನ್ನ ತೆಗೆದು ಹಾಕುತ್ತಾ ಇದ್ದೀರಲ್ಲ ನೀವೂ ದೇಶದ್ರೋಹಿಗಳು ಎಂಬುದನ್ನ ಮರೆಯಬಾರದು. ಇವತ್ತು ನೀವೆಲ್ಲಾ ಸೇರಿ ಗಾಂಧೀಜಿ ಹೆಸರಿನ ಮುಂದೆ ಪ್ರಧಾನ ಮಂತ್ರಿಗಳು ಹೊರಗಡೆ ದೇಶಕ್ಕೆ ಹೋದರೆ, ಬೇರೆ ದೇಶದ ಪ್ರಧಾನಿಗಳು ನಮ್ಮ ದೇಶಕ್ಕೆ ಬಂದರೆ ಗಾಂಧಿ ಸಮಾಧಿಗೆ ಹೋಗಿ ಪೂಜೆ ಮಾಡ್ತಾರೆ.

ಇಂದು ನೀವೂ ಅವರನ್ನು ಕೊಂದವರ ಹೆಸರನ್ನ ಮುಂದಕ್ಕೆ ತೆಗೆದುಕೊಂಡು, ಗಾಂಧೀಜಿ ಅವರನ್ನ ಕೊಲೆ ಮಾಡುವುದಕ್ಕೆ ಪ್ರಯತ್ನ ಮಾಡ್ತಾ ಇದ್ದೀರಿ. ನರೇಗಾ ಯೋಜನೆ ಈ ದೇಶದ ಜನರಿಗೆ ಉದ್ಯೋಗ ಕೊಡುವ ಯೋಜನೆ. ಆದ್ದರಿಂದ ಈ ನ್ಯಾಷನಲ್ ಹೆರಾಲ್ಡ್ ಕೇಸ್ ಮತ್ತು ನರೇಗಾ ಹೆಸರನ್ನು ಕಾಪಾಡುವುದಕ್ಕೆ ಬಿಜೆಪಿಯವರು ನಮ್ಮ ಇತಿಹಾಸವನ್ನ ತಿರುಚುವುದಕ್ಕೆ ಮಾಡುವ ಪ್ರಯತ್ನಕ್ಕೆ ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now