Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಂಗಾಂಗ ದಾನ ಮಾಡಿದ ತುಮಕೂರಿನ 12 ವರ್ಷದ ಬಾಲಕಿ : ಮೃತದೇಹದ ಮೆರವಣಿಗೆಯಲ್ಲಿ ನೂರಾರು ಜನ ಭಾಗಿ..!

---Advertisement---

 

ತುಮಕೂರು: 12 ವರ್ಷದ ಬಾಲಕಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಸಾವು ಬದುಕಿನ ನಡುವೆ ಹೋರಾಡಿ, ಪ್ರಾಣಬಿಟ್ಟ ಈ ಪುಟ್ಟ ಬಾಲಕಿ ಅಂಗಾಂದ ದಾನದಿಂದ ಆರು ಜನರಿಗೆ ಬೆಳಕಾಗಿದ್ದಾಳೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಂದನಾ, ಆಸ್ಪತ್ರೆಗೆ ದಾಖಲಾಗಿದ್ದಳು. ಸತತ ಏಳು ದಿನಗಳ ಕಾಲ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ಇಹಲೋಕ ತ್ಯಜಿಸಿದಳು. ಆದರೆ ಸಾವಿನಲ್ಲೂ ಮತ್ತಷ್ಟು ಜನಕ್ಕೆ ಬೆಳಕಾಗಿದ್ದು ಮಾತ್ರ ಶ್ಲಾಘನೀಯ ಸಂಗತಿಯಾಗಿದೆ.

ಈ ಪುಟ್ಟ ಬಾಲಕಿಯ ಕೆಲಸಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಆಕೆಯ ಕಡೆಯ ಪಯಣದಲ್ಲಿ ನೂರಾರು ಜನ ಜೊತೆಯಾಗಿದ್ದಾರೆ. ಇಂದು ಚಂದನಾ ಅವರ ಅಂತ್ಯಕ್ರಿಯೆ. ಹೀಗಾಗಿ ಆಕೆಯ ಹುಟ್ಟೂರು ತುಮಕೂರು ಜಿಲ್ಲೆಯ ತಿಪಟೂರಿಗೆ ಇಂದು ಮೃತದೇಹ ತಲುಪಿದೆ. ಚಂದನಾ ಮೃತದೇಹವನ್ನು ಮೆರವಣಿಗೆ ಮಾಡುವುದರ‌ ಮೂಲಕ ಕೊಂಡೊಯ್ಯಲಾಗಿದೆ. ಈ ಮೆರವಣಿಗೆಯಲ್ಲಿ ನೂರಾರು ಜನ ಭಾಗಿಯಾಗಿ, ಚಂದನಾ ಆತ್ಮಕ್ಕೆ ಶಾಂತಿಕೋರಿದ್ದಾರೆ.

ಚಂದನಾಳ ಮೃತದೇಹ ಕಂಡು ಶಿಕಗಷಕರು ಮತ್ತು ಸಹಪಾಠಿಗಳಿಗೆ ದುಃಖ ತಡೆಯಲಾಗಿಲ್ಲ. ಚಂದನಾ ತಿಪಟೂರಿನ ಶ್ರೀವಿವೆಕಾನಂದ ಇಂಟರ್ ನ್ಯಾಷನಲ್ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸ್ಕೂಲ್ ಮುಗಿಸಿ ವಾಪಾಸ್ ಮನೆಗೆ ಬರುವಾಗ ಜುಲೈ 23ರಂದು ರಸ್ತೆ ಅಪಘಾತವಾಗಿತ್ತು. ಅಪಘಾತದ ರಭಸಕ್ಕೆ ತಲೆಗೆ ಜೋರು ಪೆಟ್ಟು ಬಿದ್ದಿತ್ತು. ಲಾರಿ ಡಿಕ್ಕಿ ಹೊಡೆದು ಮೆದುಳು ನಿಷ್ಕ್ರಿಯವಾಗಿತ್ತು. ಅಪಘಾತದ ಬಳಿಕ ಹಾಸನ ಮೆಡಿಕಲ್ ಕಾಲೇಜಿನಲ್ಲಿ ಚಂದನಾಗೆ ಚಿಕಿತ್ಸೆ ನೀಡಲಾಗಿತ್ತು. ಸಾವು ಬದುಕಿನ ನಡುವೆ ಆರು ದಿನಗಳ ಕಾಲ ಹೋರಾಟ ಮಾಡಿ, ಇನ್ನು ಆಗಲ್ಲ ಅಂತ ಹೊರಟೇ ಬಿಟ್ಟಿದ್ದಾಳೆ. ಬಾರದ ಲೋಕಕ್ಕೆ ಹೊರಡುವುದಕ್ಕೂ ಮುನ್ನ ಆರು ಜನಕ್ಕೆ ಜೀವದಾನ ಮಾಡಿ ಹೋಗಿದ್ದಾಳೆ. ಇಷ್ಟು ಪುಟ್ಟ ಬಾಲಕಿ ಅಂಗಾಂಗ ದಾನ ಮಾಡುವ ಕಾರ್ಯಕ್ಕೆ ಎಲ್ಲರಿಂದಾನೂ ಮೆಚ್ಚುಗೆ ವ್ಯಕ್ತವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...