ಬೆಂಗಳೂರು: ಪ್ರೀತಿ, ಪ್ರೇಮ ಅಂತ ಸೈಕೋಗಳ ರೀತಿ ಆಡಿ ಅದೆಷ್ಟೋ ಹುಡುಗರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಹುಡುಗಿಯರ ಜೀವನವನ್ನೇ ಕೊಂದು ಬಿಡುತ್ತಾರೆ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ವಿಘ್ನೇಶ್ ಎಂಬಾತ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಂತ್ರಿಮಾಲ್ ನ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.
ಯಾಮಿನಿ ಪ್ರಿಯಾ ಕೊಲೆಯಾದ ವಿದ್ಯಾರ್ಥಿನಿ. ಯಾಮಿನಿ ಲವ್ ಮಾಡದೆ ಇರುವುದಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾಮಿನಿ ಪ್ರಿಯಾ ಬಿ ಫಾರ್ಮಾ ಮಾಡುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೇನೆ ಮನೆಯಿಂದ ಕಾಲೇಜಿಗೆ ಹೋಗಿದ್ದಾರೆ. ಮಧ್ಯಾಹ್ನ ಕಾಲೇಜು ಮುಗಿಸಿ, ಮನೆಗೆ ಬರುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ವಿಘ್ನೇಶ್, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲಿಂದ ತಕ್ಷಣ ಆರೋಪಿ ಪರಾರಿಯಾಗಿದ್ದಾನೆ.
ಈ ಸಂಬಂಧ ಶ್ರೀರಾಮಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಘ್ನೇಶ್ ಎಂಬಾತನ ಮೇಲೆ ಪೊಲೀಸರಿಗೂ ಅನುಮಾನವಿದ್ದು, ಆತನ ಹುಡುಕಾಟ ಶುರು ಮಾಡಿದ್ದಾರೆ. ಪ್ರೀತಿ, ಪ್ರೇಮ ಅಂತ ಹುಡುಗಿಯ ಬದುಕನ್ನೇ ಹಾಳು ಮಾಡಿದ್ದಾನೆ. ಇನ್ನು ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ. ಅದೆಲ್ಲ ಏನೇ ಇರಲಿ, ಕೊಂದ ಹುಡುಗಿಯ ಬಗ್ಗೆ ಮನೆಯವರೆಲ್ಲ ಎಷ್ಟು ಕನಸ್ಸನ್ನ ಇಟ್ಟುಕೊಂಡಿದ್ದರು, ಯಾಮಿನಿ ಪ್ರಿಯಾಗೇನೆ ಎಷ್ಟು ಕನಸುಗಳಿದ್ದವು. ಒಂದೇ ಏಟಿಗೆ ಆ ಕನಸುಗಳೆಲ್ಲ ಕಮರುವಂತೆ ಮಾಡಿ ಬಿಟ್ಟ ಆತ. ಈಗ ಆಕೆಯೂ ಇಲ್ಲ, ಈತ ಬಯಸುತ್ತಿದ್ದ ಪ್ರೀತಿಯು ಇಲ್ಲದಂತಾಗಿದೆ.

