ವೀರೇಂದ್ರ ಹೆಗ್ಡೆ ಬಳಿ ಕ್ಷಮೆ ಕೇಳ್ತೇನೆ : ಸುಜಾತ ಭಟ್ ಬೇಸರ

1 Min Read

ದಕ್ಷಿಣ ಕನ್ನಡ: ಧರ್ಮಸ್ಥಳದ ಕೇಸಲ್ಲಿ ಈ ಸುಜಾತ ಭಟ್ ಸಾಕಷ್ಟು ಸುದ್ದಿಯಾದರು. ಇಲ್ಲದೆ ಇರುವ ಮಗಳನ್ನ ಇದ್ದಾಳೆ ಎಂದು, ಹುಡುಕಿ ಕೊಡಿ ಎಂದು, ಇನ್ಯಾರದ್ದೋ ಫೋಟೋ ತೋರಿಸಿ ಪೇಚಿಗೆ ಸಿಲುಕಿದ್ದರು. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಬಳಿ ಕ್ಷಮೆ ಕೇಳ್ತೇನೆ ಎಂದಿದ್ದಾರೆ.

ಖಾಸಗಿ ಚಾನೆಲ್ ಮಾತನಾಡಿರುವ ಸುಹಾತ ಭಟ್, ಪ್ರತಿಯೊಂದು ಹಂತದಲ್ಲೂ ನಾನು ಮೋಸ ಹೋದೆ. ಅಂದು ದೆಹಲಿಗೆ ಹೋದಾಗ ಮಾಸ್ಕ್ ಮ್ಯಾನ್ ಜೊತೆಗೆ ಇದ್ದ. ಆದ್ರೆ ಈತನೇ ಮಾಸ್ಕ್ ಮ್ಯಾನ್ ಅನ್ನೋದು ಗೊತ್ತಿರಲಿಲ್ಲ. ಈ ಗ್ಯಾಂಗ್ ನಲ್ಲಿದ್ದ ಒಬ್ಬರು ಮಾಸ್ಕ್ ಮ್ಯಾನ್ ನನ್ನು ತೋರಿಸಿ, ನಿಮ್ಮ ಬಾಡಿಗಾರ್ಡ್ ಎಂದು ಪರಿಚಯಿಸಿದ್ದರು. ನಾನು ಕೂಡ ಹಾಗೇ ಎಂದುಕೊಂಡಿದ್ದೆ. ಮಾಸ್ಕ್ ಮ್ಯಾನ್ ಒಂದು ದಿನ ನನ್ನ ಮನೆಯಲ್ಲೂ ಇದ್ದ. ಕೋರ್ಟ್ ನಲ್ಲಿ ಮುಖ ರಿವೀಲ್ ಆದಾಗಲೇ ನನಗೂ ಈತ ಮಾಸ್ಕ್ ಮ್ಯಾನ್ ಅನ್ನೋದು ಗೊತ್ತಾಗಿದ್ದು ಎಂದಿದ್ದಾರೆ.

ಅನನ್ಯ ಭಟ್ ಕೇಸಲ್ಲಿ ನಾನು ಪಾತ್ರಧಾರಿಯಷ್ಟೆ. ಸೂತ್ರಧಾರಿಗಳು ಬೇರೆನೆ ಇದ್ದಾರೆ. ಈಗ ಅವರ ಹೆಸರನ್ನ ಹೇಳುವುದಕ್ಕೆ ಹೋಗುವುದಿಲ್ಲ. ಅವರವರು ಮಾಡಿದ ಕರ್ಮ, ಅವರವರೇ ಅನುಭವಿಸುತ್ತಾರೆ. ನಾನು ಮಾಡಿದ ಕರ್ಮ ನಾನು ಅನುಭವಿಸುತ್ತೇನೆ. ನಾನು ಮಾಡಿದ ತಪ್ಪಿಗೆ ಧರ್ಮಸ್ಥಳಕ್ಕೆ ಹೋಗಿ ಕ್ಷಮೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆಯವರ ಹತ್ತಿರ ಹೋಗಿ ಕ್ಷಮೆ ಕೇಳುತ್ತೇನೆ. ಆ ವಿಚಾರದಲ್ಲಿ ಕ್ಷಮೆ ಕೂಡ ಚಿಕ್ಕದು. ಅವರ ಬಳಿ ಹೋಗಿ ಕ್ಷಮೆ ಕೇಳುತ್ತೇನೆ. ಅವರು ಕ್ಷಮಿಸಿದರೆ ನನಗೆ ಅಷ್ಟೇ ಸಾಕು. ಯಾವಾಗ ಹೋಗಬೇಕು ಅನ್ನೋದನ್ನ ಇನ್ನು ನಿರ್ಧಾರ ಮಾಡಿಲ್ಲ ಎಂದು ಸುಜಾತ ಭಟ್ ಹೇಳಿಕೊಂಡಿದ್ದಾರೆ.

 

Share This Article
Enable Notifications OK No thanks