ಪಹಣಿ ತಿದ್ದುಪಡಿ ಆಂದೋಲನ : ರೈತರು ಪ್ರಯೋಜನ ಪಡೆದುಕೊಳ್ಳಿ : ಮೆಹಬೂಬ್ ಜಿಲಾನಿ ಖುರೇಶಿ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 24 : ತಾಲ್ಲೂಕಿನ ರೈತರ ಪಹಣಿ ತಿದ್ದುಪಡಿ ಆಂದೋಲನ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಅಧ್ಯಕ್ಷತೆಯಲ್ಲಿ ಸೋಮವಾರ ತಾಲ್ಲೂಕು ಕಚೇರಿಯಲ್ಲಿ ನಡೆಯಿತು.

ಅ ಮತ್ತು ಬ ಖರಾಬು ತಿದ್ದುಪಡಿ, ಬಿನ್/ಕೋಂ ಹೆಸರು ತಿದ್ದುಪಡಿ, ಹಿಸ್ಸಾ ತಿದ್ದುಪಡಿ, ಪಹಣಿ ಕಾಲಂ, 3 ಮತ್ತು 9 ವಿಸ್ತೀರ್ಣ ವ್ಯತ್ಯಾಸ ತಿದ್ದುಪಡಿ, ಎಂ.ಆರ್.ರಂತೆ ಮತ್ತು ಪಹಣಿಯಲ್ಲಿನ ಇತರೆ ದೋಷಗಳನ್ನು ಸರಿಪಡಿಸಲಾಯಿತು. ಇದೆ ತಿಂಗಳ 30 ರವರೆಗೆ ತಿದ್ದುಪಡಿಗೆ ಅವಕಾಶವಿದ್ದು, ರೈತರು ಪ್ರಯೋಜನ ಪಡೆದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಮನವಿ ಮಾಡಿದರು.

ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಗ್ರೇಡ್-2 ತಹಶೀಲ್ದಾರ್ ನಾಗರಾಜ್, ಶಿರಸ್ತೆದಾರ್ ವತ್ಸಲ ಇವರುಗಳು ಪಹಣಿ ತಿದ್ದುಪಡಿ ಆಂದೋಲನದಲ್ಲಿದ್ದರು.

Share This Article