ಬೆಂಗಳೂರು: ಬಹಳ ಕುತೂಹಲದಿಂದ ಕಾಯ್ತಾ ಇದ್ದಂತ ಒಳ ಮೀಸಲಾತಿ ವರದಿಯನ್ನ ಇಂದು ಸಲ್ಲಿಕೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ವರದಿಯನ್ನ ಸ್ವೀಕಾರ ಮಾಡಿದ್ದಾರೆ. ಈ ಬಗ್ಗೆ ಇದೀಗ ಸಚಿವ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಒಳಮೀಸಲಾತಿ ಸುಮಾರು 35 ವರ್ಷಗಳ ಹೋರಾಟದ ಫಲ. ಇಂದು ಜಯ ಸಿಕ್ಕಿದೆ ಎಂದಿದ್ದಾರೆ
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ನಾವೆಲ್ಲಾ ಸಚಿವರು ಸೇರಿ ಕಮಿಷನ್ ಅಪಾಯಿಂಟ್ ಮಾಡಿದ್ವಿ. ಜಸ್ಟೀಸ್ ನಾಗಮೋಹನ್ ದಾಸ್ ಅವರು ಬಹಳ ವಿಚಾರ ಮಾಡಿ, ಸರ್ವೇ ಮಾಡಿ ಇದನ್ನ ಒಪ್ಪಿಸಿದ್ದಾರೆ. ಮೊಟ್ಟ ಮೊದಲು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಹಾಗೂ ನಾಗಮೋಹನ್ ದಾಸ್ ಅವರಿಗೆ ಧನ್ಯವಾದಗಳನ್ನ ತಿಳಿಸ್ತೇವೆ. ಇತಿಹಾಸದ ಪುಟಗಳಲ್ಲಿ ಇದು ದಾಖಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಸ್ವೀಕಾರ ಮಾಡಿದ್ದಾರೆ. ಸುಮಾರು 35 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ಕ್ಯಾಬಿನೆಟ್ ನಿಂದ ಬಂದ ಮೇಲೆ ಯಾವ ತೀರ್ಮಾನವಾಗಲಿದೆ ಎಂಬುದನ್ನ ಅಲ್ಲಿಂದ ಬಂದ ಮೇಲೆ ನಾವೂ ಮಾತಾಡ್ತೇವೆ. ನಾವೆಲ್ಲಾ ಒಟ್ಟಿಗೆ ಇದ್ದೀವಿ, ಒಟ್ಟಿಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ, ಅದನ್ನ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರುವುದಕ್ಕೆ ತೀರ್ಮಾನ ಮಾಡ್ತೇವೆ. ಶಿಪಾರಸು ಜಾರಿಯಾಗುವ ವಿಶ್ವಾಸ ನಮಗಿದೆ ಎಂದಿದ್ದಾರೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಒಳಮೀಸಲಾತಿ ವಿಚಾರಕ್ಕೆ ವರದಿಯನ್ನ ಮುಖ್ಯಮಂತ್ರಿಗಳಿಗೆ ಒಪ್ಪಿಸಿದ್ದಾರೆ. ಇಡೀ ದೇಶದಲ್ಲಿ ವ್ಯವಸ್ಥಿತವಾಗಿ, ಆಧುನಿಕವಾಗಿ, ತಾಂತ್ರಿಕತೆಯನ್ನ ಉಪಯೋಗ ಮಾಡಿ ಕೇವಲ ಎರಡು ತಿಂಗಳಲ್ಲಿ ಒಪ್ಪಿಸಿದ್ದಾರೆ. ಅದರ ಒಳಗೆ ಏನಿದೆ ಗೊತ್ತಿಲ್ಲ. ಸಿಎಂ ವರದಿಯನ್ನ ಸ್ವೀಕಾರ ಮಾಡಿದ್ದಾರೆ ಎಂದಿದ್ದಾರೆ.


