Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನನ್ನ ಸಾವಿಗೆ ಗಂಡ ಹಾಗೂ ಆಫೀಸಲ್ಲಿರುವವರು ಕಾರಣ : MBA ವಿದ್ಯಾರ್ಥಿನಿಯ ದುರಂತ ಅಂತ್ಯದ ಕೊನೆಯ ಮೆಸೇಜ್..!

---Advertisement---

ಬೆಂಗಳೂರು: ಆಕೆ ಎಂಬಿಎ ಓದುತ್ತಾ ಇದ್ದಳು. ಆ ಸಮಯದಲ್ಲಿ Instagram ನಲ್ಲಿ ಪರಿಚಯವಾದ ಹುಡುಗನ ಜೊತೆಗೆ ಪ್ರೀತಿ ಪ್ರೇಮ ಅಂತ ಬಿದ್ದ ಆ ಸುಂದರ ಹುಡುಗಿ ಇಂದು ದುರಂತ ಅಂತ್ಯ ಕಂಡಿದ್ದಾಳೆ. 24 ವರ್ಷದ ಸ್ಪಂದನಾ ಮೃತ ದುರ್ದೈವಿ. ನೂರಾರು ಕನಸುಗಳನ್ನ ಕಂಡು, ಪ್ರೀತಿಸಿದಾತನ ಜೊತೆಗೆ ಲೈಫ್ ಸೂಪರ್ ಆಗಿನೆ ಇರುತ್ತೆ ಅಂದುಕೊಂಡಿದ್ದ ಸ್ಪಂದನಾ ಬದುಕು ಇದೀಗ ಅದೇ ಗಂಡನ ಮನೆಯವರಿಗೆ ದುರಂತ ಅಂತ್ಯ ಕಂಡಿದೆ.

ಸ್ಪಂದನಾ ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡ್ತಾ ಇದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಭಿಷೇಕ್ ಎಂಬಾತನ ಪರಿಚಯವು ಆಯ್ತು. ಅಲ್ಲಿಂದ ಲವ್ವಲ್ಲಿ ಬಿದ್ದ ಅಭಿಷೇಕ್ ಮತ್ತು ಸ್ಪಂದನಾ ಮನೆಯವರ ವಿರೋಧದ ನಡುವೆಯೂ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಆದರೆ ಗಂಡನ ಮನೆಯಲ್ಲಿ ಸ್ಪಂದನಾಗೆ ವರದಕ್ಷಿಣೆ ಕಿರುಕುಳ ಶುರುವಾಗಿತ್ತಂತೆ. ಇದರಿಂದ ನೊಂದಿದ್ದ ಸ್ಪಂದನಾ ಹೆಣವಾಗಿ ಪತ್ತೆಯಾಗಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದಕ್ಕೂ ಮುನ್ನ ತಂಗಿಯ ಜೊತೆಗೆ ಕೊನೆಯ ಮಾತುಗಳನ್ನ ಆಡಿದ್ದಾರೆ. ಆ ವಾಟ್ಸಾಪ್ ಚಾಟ್ ಈಗ ವೈರಲ್ ಆಗಿದೆ. ಆ ವಾಟ್ಸಾಪ್ ನಲ್ಲಿ ನನ್ನ ಸಾವಿಗೆ ಅಭಿ ಹಾಗೂ ಆಫೀಸಲ್ಲಿರುವ ಸಿಬ್ಬಂದಿಗಳೆಲ್ಲಾ ಕಾರಣ ಎಂದು ಟೆಕ್ಸ್ಟ್ ಮಾಡಿದ್ದಾರೆ. ಸದ್ಯ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ತನಿಖೆಯ ನಂತರ ಆಫೀಸ್ ಸಹ ಉದ್ಯೋಗಿಗಳು ಈ ಸಾವಿಗೆ ಹೇಗೆ ಕಾರಣ ಎಂಬ ಸತ್ಯವೂ ಹಿರ ಬರಲಿದೆ. ಸದ್ಯ ಅಭಿಷೇಕ್ ಹಾಗೂ ಅವರ ತಾಯಿ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment