Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜೆಇಇ ಅಡ್ವಾನ್ಸ್ ಫಲಿತಾಂಶ : ರಾಷ್ಟ್ರಮಟ್ಟದ 34ನೇ ರ‌್ಯಾಂಕ್ ದಾಖಲಿಸಿದ  ಮಧ್ಯ ಕರ್ನಾಟಕದ ಏಕೈಕ ಪಿಯು  ಕಾಲೇಜು ಚಿತ್ರದುರ್ಗದ  “ಎಸ್ ಆರ್ ಎಸ್”  

---Advertisement---

ಸುದ್ದಿಒನ್, ಜೂನ್. 02 : ಜೆಇಇ ಅಡ್ವಾನ್ಸ್ -2025ರ ಫಲಿತಾಂಶದಲ್ಲಿ 34ನೇ ರ‌್ಯಾಂಕ್ ಪಡೆಯುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಎಸ್ ಆರ್ ಎಸ್ ಕಾಲೇಜಿನ ವಿದ್ಯಾರ್ಥಿ ಕೆ ಪಿ ಪೂಜಿತ್‌ ಕುಲಾಲ್‌ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಕ್ರಮವಾಗಿ ತ್ರಿವೇಣಿ- 502,
ಆನಂದ್‌ ಎನ್‌ ವೈ-559,
ಹರ್ಷಿತ್‌ರಾಜ್‌ ಎನ್‌ ವಿ-1083,
ರಕ್ಷಿತಾ ಟಿ ಎಂ-1947 ಹಾಗೂ
ವಿಕಾಸ್‌ ಜಿ ನಾಯಕ್‌-3748 ನೇ ರ್ಯಾಂಕ್‌ನೊಂದಿಗೆ ದಾಖಲೆ ನಿರ್ಮಿಸಿದ್ದಾರೆ.

ಕೇವಲ 40 ವಿದ್ಯಾರ್ಥಿಗಳಲ್ಲಿ, 21 ವಿದ್ಯಾರ್ಥಿಗಳು IITಗೆ ಪ್ರವೇಶಾತಿ ಪಡೆಯುತ್ತಿರುವುದು ಐತಿಹಾಸಿಕ ದಾಖಲೆ.  ರಾಷ್ಟ್ರ ಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್‌ಗಳೊಂದಿಗೆ ಹಿಂದಿನ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ, ಐಐಟಿ ಹಾಗೂ ಐಐಐಟಿ ಗಳಿಗೆ ಅರ್ಹತೆಗಳಿಸಿರುವುದು ವಿಶೇಷ.  ಇದರೊಂದಿಗೆ ರಾಷ್ಟ್ರಮಟ್ಟದಲ್ಲಿ ಅತೀ ಹೆಚ್ಚು ರ್ಯಾಂಕ್‌ಗಳನ್ನು ದಾಖಲಿಸಿದ ಮಧ್ಯ ಕರ್ನಾಟಕದ ಏಕೈಕ ಕಾಲೇಜು “ಎಸ್‌ ಆರ್‌ ಎಸ್‌” ಪಿಯು ಕಾಲೇಜ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾಲೇಜಿಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

 

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...