ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ಹಾಗೂ ಆಕೆಯ ತಂದೆಯ ವಿಚಾರ ಇನ್ನು ಮುಗಿಯುವಂತೆ ಕಾಣಿಸುತ್ತಿಲ್ಲ. ಮದುವೆಗೆ ಕರೆದಿಲ್ಲ. ತಂದೆ ಎಂಬ ಗೌರವ ಇಲ್ಲ. ಮೋಸಗಾತಿ. ಆಕೆಯ ಗಂಡನು ಮೋಸಗಾರ ಎಂದೆಲ್ಲಾ ಆರೋಪ ಮಾಡಿದ್ದಂತ ಬಾಲಕೃಷ್ಣ ನಾಯ್ಕ್ ಇದೀಗ ನನ್ನ ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಆರೋಪಿಸಿ, ದೂರು ದಾಖಲಿಸಿದ್ದಾರೆ.
ಹಿಂದೆ ಹಲವು ರೀತಿಯ ಆರೋಪಗಳನ್ನು ಮಾಡಿದ್ದ ಚೈತ್ರಾ ತಂದೆ, ಇದೀಗ ಜೀವ ಬೆದರಿಕೆ ಹಾಕಿದ ಆರೋಪ ಮಾಡಿದ್ದಾರೆ. ನನ್ನ ಜೀವ ತೆಗೆಯಲು ಚೈತ್ರಾ ಕುಂದಾಪುರ ಸುಪಾರಿ ನೀಡಿದ್ದಾರೆ. ನನ್ನ ಆಸ್ತಿ ಹಾಗೂ ಭೂಮಿಗಾಗಿ ನನ್ನನ್ನ ಬಲಿ ಪಡೆಯಬಹುದು. ಭೂಗತ ದೊರೆಗಳ ಮೂಲಕ ಜೀವ ತೆಗೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಆಸ್ತಿಗಾಗಿ ಹೇಯ ಕೃತ್ಯವನ್ನು ಮಾಡಬಹುದು ಎಂದು ದೂರು ನೀಡಿದ್ದಾರೆ.
ಇನ್ನು ಚೈತ್ರಾ ಕುಂದಾಪುರ ಇದಕ್ಕೆಲ್ಲ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈಗಷ್ಟೇ ಮದುವೆಯಾಗಿರುವ ಚೈತ್ರಾ ಕುಂದಾಪುರ ಗಂಡನ ಮನೆಯಲ್ಲಿ ಹಲವು ವಿಡಿಯೋಗಳನ್ನ ಮಾಡುತ್ತಾ ಆರಾಮವಾಗಿದ್ದಾರೆ. ಹೊಸದಾಗಿ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಹೊಸತರದ ವಿಡಿಯೋಗಳನ್ನ ಹಾಕುತ್ತಾ ಇದ್ದಾರೆ. ಅಡುಗೆ ವಿಡಿಯೋಗಳು, ಗಂಡ ಹೆಂಡತಿಯ ಅನ್ಯೋನ್ಯತೆಯ ಬಗ್ಗೆಯೂ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ ಇರುತ್ತಾರೆ. ಹಲವು ವರ್ಷಗಳಿಂದ ಪ್ರೀತಿಸಿದ್ದ ಶ್ರೀಕಾಂತ್ ಕಶ್ಯಪ್ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ತಂದೆ ಮಾಡುತ್ತಿರುವ ಆರೋಪಗಳಿಗೆ ಚೈತ್ರಾ ಈ ಹಿಂದೆಯೂ ತಿರುಗೇಟು ನೀಡಿದ್ದು, ಕುಡುಕ ತಂದೆ, ಮಕ್ಕಳಿಗೆ ಏನು ಮಾಡಿಲ್ಲ ಎಂಬ ಬೇಸರದ ನುಡಿಯನ್ನ ವ್ಯಕ್ತಪಡಿಸಿದ್ದರು. ಅವರ ತಾಯಿ ಕೂಡ ಗಂಡನ ವಿರುದ್ಧವೇ ಆರೋಪ ಮಾಡಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











