ಬೆಂಗಳೂರು: ಸದನದ ವೇಳೆ ಸಿಟಿ ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಮಾತಿನ ಚಕಮಕಿಯಲ್ಲಿ ಸಿಟಿ ರವಿ ವೇಶ್ಯೆ ಎಂಬ ಪದ ಬಳಕೆ ಮಾಡಿದ್ದರು. ಈ ಪದ ಬಳಕೆ ದೊಡ್ಡ ಮಟ್ಟಕ್ಕೆ ಪರಿಣಾಮ ಉಂಟು ಮಾಡಿತ್ತು. ಸಿಟಿ ರವಿ ಅವರನ್ನ ಪೊಲೀಸರು ಅರೆಸ್ಟ್ ಕೂಡ ಮಾಡಿದ್ದರು. ಪರ ವಿರೋಧಗಳು ಕೇಳಿ ಬಂತು. ಬಳಿಕ ಸಿಟಿ ರವಿ ಅವರು ನಾನು ಆ ಪದ ಬಳಕೆ ಮಾಡಿಲ್ಲ ಪ್ರಸ್ಟ್ರೇಟ್ ಅಂತ ಬಳಸಿದ್ದೀನಿ ಅಂದ್ರು. ಇದೀಗ ಅದರ ವರದಿ ಬಂದಿದ್ದು ಸಿಟಿ ರವಿ ಅವರು ಆ ಪದ ಬಳಕೆ ಮಾಡಿರುವುದು ಸತ್ಯ ಎನ್ನಲಾಗಿದೆ.
![](https://suddione.com/content/uploads/2024/10/gifmaker_me-5-1.gif)
ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸದನದ ವಿಡಿಯೋವನ್ನು ಸಿಐಡಿ ಪೊಲೀಸರು ಫೋರಿನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಸಂಬಂಧ ವರದಿ ಬಂದಿದ್ದು, ಸಿಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವುದು ಅದರಲ್ಲಿ ದೃಢವಾಗಿದೆ. ಅದರಲ್ಲೂ ನಾಲ್ಕು ಗಂಟೆಯ ವಿಡಿಯೋ ರೆಕಾರ್ಡ್ ನಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.
ಆದರೆ ರವಿ ಅವರು ನಾನು ಆ ಪದ ಬಳಕೆ ಮಾಡಿಲ್ಲ ಎಂದೇ ವಾದ ಮಾಡಿದ್ದಾರೆ. ಹೀಗಾಗಿ ಪೊಲೀಸರು ಸಿಟಿ ರವಿ ಅವರ ವಾಯ್ಸ್ ಸ್ಯಾಂಪಲ್ ಪಡೆಯಲು ಮುಂದಾಗಿದ್ದಾರೆ. ಆದರೆ ಅವರು ನೀಡಿಲ್ಲ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದ್ದು, ಅಲ್ಲಿಂದಾನೇ ವಿಚಾರಣೆಗೆ ಹಾಗೂ ವಾಯ್ಸ್ ಸ್ಯಾಂಪಲ್ ಗೆ ಪೊಲೀಸರು ಅನುಮತಿ ಪಡೆಯಲಿದ್ದಾರೆ.
![](https://suddione.com/content/uploads/2025/01/studio-11.webp)