Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಾಣಿ ವಿಲಾಸ ಮಾತ್ರವಲ್ಲ ತುಂಬಿ ತುಳುಕುತ್ತಿವೆ ಚಿತ್ರದುರ್ಗದ ಈ ಜಲಮೂಲಗಳು..!

---Advertisement---

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮಂದಿಗೆ ಕುಡಿಯುವ ನೀರು, ವ್ಯವಸಾಯಕ್ಕಾಗಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದರೆ ತುಂಬಾನೇ ಅನುಕೂಲವಾಗುತ್ತದೆ. ಈಗ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಸಾಧ್ಯತೆ ತೀರಾ ಹತ್ತಿರವಿದೆ. ಬೆರಳೆಣಿಕೆಯಷ್ಟು ಅಡಿಗಳು ನೀರು ತುಂಬಿದರೆ ಮೂರನೇ ಬಾರಿ ಕೋಡಿ ಬೀಳಲಿದೆ. ಇದರ ಜೊತೆಗೆ ಚಿತ್ರದುರ್ಗದಲ್ಲಿ ಹಲವು ನೀರಿನ ಮೂಲಗಳು ತುಂಬಿದ್ದು, ಸೌಂದರ್ಯ ಹೆಚ್ಚಿಸಿವೆ.

ಕೋಟೆನಾಡಿನಲ್ಲಿ ಜಲಮೂಲಗಳು ಕಡಿಮೆ ಏನು ಇಲ್ಲ. ಪಾಳೇಗಾರರ ಕಾಲದಲ್ಲಿ ಹತ್ತಾರು ಜಲಮೂಲಗಳನ್ನು ನಿರ್ಮಾಣ ಮಾಡಿದ್ದರು. ಈಗ ಅವೆಲ್ಲಕ್ಕೂ ಮರು ಜೀವ ಬಂದಿದೆ. ತುಂಬಿದ ನೀರನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಕೋಟೆ ಬಳಿಯ ಸಿಹಿನೀರು ಹೊಂಡ, ಕೆಂಚಪ್ಪ ಮಲ್ಲಪ್ಪ ಬಾವಿ, ಸಂತೆ ಹೊಂಡ, ಚಿನ್ನಕ್ಕಿ ಹೊಂಡ, ಕೆಳಗೋಟೆಯಲ್ಲಿನ ಚನ್ನಕೇಶವ ದೇಗುಲ ಬಳಿಯ ಹೊಂಡ, ಗಣಪತಿ ದೇಗುಲದ ಬಳಿ ಇರುವ ಬಾವಿ. ಇವೆಲ್ಲವೂ ನೀರು ಸಂಗ್ರಹದ ಮೂಲಗಳಾಗಿವೆ. ಈ ವರ್ಷ ಉತ್ತಮ ಮಳೆಯಾದ್ದ ಕಾರಣದಿಂದ ನೀರು ತುಂಬಿದೆ.

ಕಳೆದ ವರ್ಷವೂ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿತ್ತು. ಮಳೆಯಿಲ್ಲದೆ ರಾಜ್ಯದ ಜನ ಕಂಗಾಲಾಗಿದ್ದರು. ಇನ್ನು ಜಾನುವಾರುಗಳ ಸ್ಥಿತಿ ಹೇಳತೀರದು. ಆ ರೀತಿಯ ಪರಿಸ್ಥಿತಿ ಉಂಟಾಗಿತ್ತು. ಆದರೆ ಈ ವರ್ಷ ಆ ರೀತಿ ಇಲ್ಲ. ಮಳೆಯ ನೀರು ಎಲ್ಲಾ ಜೀವ ಜಲರಾಶಿಗಳಿಗೂ ಅನುಕೂಲ ಮಾಡಿಕೊಟ್ಟಿದೆ. ನಗರದ ಅಣ್ಣ ಪುಟ್ಟ ಕೆರೆ ಕಟ್ಟೆಗಳು ತುಂಬಿದ್ದು, ಎಲ್ಲದರಲ್ಲೂ ನೀರು, ಸುತ್ತಲೂ ಅಚ್ಚ ಹಸಿರಿನಿಂದ ಕೋಟೆ ನಾಡಿನ ಅಂದ ಹೆಚ್ಚಿಸಿದೆ. ವಾಣಿ ವಿಲಾಸ ಜಲಾಶಯದ ಕೋಡಿ ಬಿದ್ದರೆ ಸ್ಥಳೀಯರು ಇನ್ನಷ್ಟು ಸಂತಸ ಪಡಲಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...